'ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದೆ. ಆಗಿನ್ನೂ ಪಿಎಚ್.ಡಿ ಮಾಡುತ್ತಿದ್ದೆ. ಮಗ ಚಿಕ್ಕವನಿದ್ದ. ಗೆಲ್ಲಲು ಆಗಿರಲಿಲ್ಲ. ಈಗ ಪಿಎಚ್ಡಿ ಮುಗಿದಿದ್ದು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು. ವಾರ್ಡಿನ ನನ್ನ ಕಚೇರಿಗೆ ಜನತೆ ಯಾವ ಸಮಯದಲ್ಲಾದರೂ ಬಂದು ತಮ್ಮ ಸಮಸ್ಯೆ, ಬೇಡಿಕೆ ಹೇಳಿಕೊಳ್ಳಬಹುದು. ನಾನೇ ಖುದ್ದಾಗಿ ಬಗೆಹರಿಸುವೆ' ಎಂದು ಗೆಲುವಿನ ನಗೆ ಬೀರಿದರು.