ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕಿರಿದು, ಸಮಸ್ಯೆ ಹಿರಿದು

Last Updated 9 ಏಪ್ರಿಲ್ 2018, 19:59 IST
ಅಕ್ಷರ ಗಾತ್ರ

ಕ್ಷೇತ್ರದಲ್ಲಿ ಈ ಹಿಂದೆ ಕುಡಿಯುವ ನೀರಿನ ಸಮಸ್ಯೆ ಇತ್ತು. ಈಗ ಕೊಳವೆಬಾವಿಗಳನ್ನು ಕೊರೆಸಿದ್ದು, ನೀರಿನ ಸಮಸ್ಯೆ ಕಡಿಮೆಯಾಗಿದೆ. ಕಾವೇರಿ ನೀರು ಪೂರೈಕೆಗೆ ಕೊಳವೆಗಳನ್ನು ಅಳವಡಿಸಲಾಗಿದೆ. ಆದರೆ, ಇನ್ನೂ ಸಂಪರ್ಕ ನೀಡಿಲ್ಲ.

ಇಲ್ಲಿನ ಪ್ರಮುಖ ಸಮಸ್ಯೆ ಬೇಗೂರು ರಸ್ತೆ. ಇದು ಅತ್ಯಂತ ಕಿರಿದಾಗಿದ್ದು, ವಾಹನ ದಟ್ಟಣೆ ಮಿತಿಮೀರಿದೆ. ಇದರ ಕಿರಿಕಿರಿಗೆ ಬೇಸತ್ತಿದ್ದೇವೆ. ಬೇಗೂರಿನಿಂದ ಬೊಮ್ಮನಹಳ್ಳಿ ಸಿಗ್ನಲ್‌ವರೆಗೆ ಹೋಗಲು ಕನಿಷ್ಠ 1 ಗಂಟೆ ಹಿಡಿಯುತ್ತದೆ. ಹಿರಿಯರು, ಮಹಿಳೆಯರು, ಮಕ್ಕಳು ಸಂಚರಿಸುವುದೇ ತ್ರಾಸದಾಯಕ ಕೆಲಸ. ರಸ್ತೆ ವಿಸ್ತರಣೆ ಮಾಡಲಾಗುತ್ತದೆ ಎಂದು ಎಲ್ಲ ಪಕ್ಷಗಳ ಮುಖಂಡರು ಹೇಳುತ್ತಿದ್ದಾರೆ. ಆದರೆ, ಕಾಮಗಾರಿ ಇನ್ನೂ ಪ್ರಾರಂ
ಭವಾಗಿಲ್ಲ. ಈ ಬಗ್ಗೆ ಶಾಸಕರು ಗಮನ ಹರಿಸಬೇಕು. ನಮ್ಮ ಬಡಾವಣೆಯಲ್ಲಿ ಉದ್ಯಾನ, ಆಟದ ಮೈದಾನ, ಗ್ರಂಥಾಲಯವಿಲ್ಲ. ವಿಶ್ರಾಂತಿ ಹಾಗೂ ವಾಯುವಿಹಾರಕ್ಕಾಗಿ ಒಂದು ಉದ್ಯಾನ ಇಲ್ಲ. ಮಕ್ಕಳು ರಸ್ತೆಯಲ್ಲೇ ಆಟವಾಡುವ ಪರಿಸ್ಥಿತಿ ಇದೆ. ಹೀಗಾಗಿ, ಉದ್ಯಾನ, ಆಟದ ಮೈದಾನ ನಿರ್ಮಿಸಬೇಕು.

– ಪ್ರಕಾಶ್‌ ಜಿ. ಗಾಳಿಗೌಡ್ರ ವಿಶ್ವಪ್ರಿಯ ಬಡಾವಣೆ, ಬೇಗೂರು ವಾರ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT