ಇಲ್ಲಿನ ಪ್ರಮುಖ ಸಮಸ್ಯೆ ಬೇಗೂರು ರಸ್ತೆ. ಇದು ಅತ್ಯಂತ ಕಿರಿದಾಗಿದ್ದು, ವಾಹನ ದಟ್ಟಣೆ ಮಿತಿಮೀರಿದೆ. ಇದರ ಕಿರಿಕಿರಿಗೆ ಬೇಸತ್ತಿದ್ದೇವೆ. ಬೇಗೂರಿನಿಂದ ಬೊಮ್ಮನಹಳ್ಳಿ ಸಿಗ್ನಲ್ವರೆಗೆ ಹೋಗಲು ಕನಿಷ್ಠ 1 ಗಂಟೆ ಹಿಡಿಯುತ್ತದೆ. ಹಿರಿಯರು, ಮಹಿಳೆಯರು, ಮಕ್ಕಳು ಸಂಚರಿಸುವುದೇ ತ್ರಾಸದಾಯಕ ಕೆಲಸ. ರಸ್ತೆ ವಿಸ್ತರಣೆ ಮಾಡಲಾಗುತ್ತದೆ ಎಂದು ಎಲ್ಲ ಪಕ್ಷಗಳ ಮುಖಂಡರು ಹೇಳುತ್ತಿದ್ದಾರೆ. ಆದರೆ, ಕಾಮಗಾರಿ ಇನ್ನೂ ಪ್ರಾರಂ
ಭವಾಗಿಲ್ಲ. ಈ ಬಗ್ಗೆ ಶಾಸಕರು ಗಮನ ಹರಿಸಬೇಕು. ನಮ್ಮ ಬಡಾವಣೆಯಲ್ಲಿ ಉದ್ಯಾನ, ಆಟದ ಮೈದಾನ, ಗ್ರಂಥಾಲಯವಿಲ್ಲ. ವಿಶ್ರಾಂತಿ ಹಾಗೂ ವಾಯುವಿಹಾರಕ್ಕಾಗಿ ಒಂದು ಉದ್ಯಾನ ಇಲ್ಲ. ಮಕ್ಕಳು ರಸ್ತೆಯಲ್ಲೇ ಆಟವಾಡುವ ಪರಿಸ್ಥಿತಿ ಇದೆ. ಹೀಗಾಗಿ, ಉದ್ಯಾನ, ಆಟದ ಮೈದಾನ ನಿರ್ಮಿಸಬೇಕು.