‘ಕೇಂದ್ರ ಸರ್ಕಾರದ ಯೋಜನೆಗಳು ಜನಪರವಾಗಿದ್ದರೂ ಸಿದ್ದರಾಮಯ್ಯ ಟೀಕಿಸುತ್ತಾರೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಾಚ್ ಕಟ್ಟುವವರಿಗೆ ಬಡವರ ಬಗ್ಗೆ ಕಾಳಜಿ ಎಲ್ಲಿಂದ ಬರುತ್ತದೆ. ‘ಅಚ್ಛೇದಿನ್’ ಬಗ್ಗೆಯೂ ಟೀಕಿಸಿದ್ದರು. ಕಲ್ಲಡ್ಕ ಪ್ರಭಾಕರ ಶಾಸ್ತ್ರೀಯವರ ಶಾಲೆಯ ಬಿಸಿಯೂಟ ನಿಲ್ಲಿಸಿ, ಭೇದಭಾವ ಹುಟ್ಟುಹಾಕಿದ್ದರು. ಇಂದಿನಿಂದಲೇ ಆ ಶಾಲೆಯಲ್ಲಿ ಮತ್ತೆ ಬಿಸಿಯೂಟ ಆರಂಭವಾಗುತ್ತದೆ’ ಎಂದು ಘೋಷಿಸಿದರು.