ಜೂನ್ 15ರಂದು ಲಕ್ಷ್ಮೀಪುರ ಗ್ರಾಮದಲ್ಲಿ ಪರಮೇಶ್ವರ ನಾಯ್ಕಅವರ ಹಿರಿಯ ಪುತ್ರ ಅವಿನಾಶ್ ಅವರ ವಿವಾಹವನ್ನು ನೆರವೇರಿಸಲಾಗಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಮದುವೆ ಸಮಾರಂಭದ ವಿಡಿಯೊ, ಭಾವಚಿತ್ರ ಸಂಗ್ರಹಿಸಿದ್ದರು. ಕೋವಿಡ್ ನಿಯಮ ಉಲ್ಲಂಘಸಿದ್ದರಿಂದ ದೂರು ದಾಖಲಿಸಲು ಅನುಮತಿ ಕೋರಿ, ಹರಪನಹಳ್ಳಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ನ್ಯಾಯಾಧೀಶರ ನಿರ್ದೇಶನದ ಮೇರೆಗೆ ದೂರು ದಾಖಲಿಸಲಾಗಿದೆ.