ಮಂಡ್ಯ: ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಭರದಲ್ಲಿ ಚುನಾವಣಾಧಿಕಾರಿಗಳು ಜ್ಯೋತಿಷ ಕೇಂದ್ರದ ‘ಹಸ್ತ’ ಮುದ್ರಿಕೆಯನ್ನೂ ಮುಚ್ಚಿದ್ದಾರೆ.
ಅಶೋಕನಗರ ಒಂದೇ ತಿರುವಿನಲ್ಲಿರುವ ಪಂಡಿತ್ ಸತ್ಯನಾರಾಯಣ ಶಾಸ್ತ್ರಿ ಅವರ ಕನಕದುರ್ಗಾ ಜ್ಯೋತಿಷ ಕೇಂದ್ರದ ಮುಂದೆ ಇಟ್ಟಿದ್ದ ಫಲಕದಲ್ಲಿ ಹಸ್ತದ ಗುರುತಿದೆ. ಹಸ್ತರೇಖೆಗಳ ವಿವರ ನೀಡಲಾಗಿದೆ. ಹಸ್ತ, ಕಾಂಗ್ರೆಸ್ ಗುರುತು ಎಂಬ ಕಾರಣಕ್ಕೆ ಚುನಾವಣಾ ಸಿಬ್ಬಂದಿ ಕಾಗದದಿಂದ ಮುಚ್ಚಿದ್ದಾರೆ.
‘ಜ್ಯೋತಿಷ ಕೇಂದ್ರದ ಹಸ್ತಕ್ಕೂ, ಕಾಂಗ್ರೆಸ್ ಗುರುತಿಗೂ ಸಂಬಂಧವಿಲ್ಲ. ಯಾವ ಕಾರಣಕ್ಕೆ ಮುಚ್ಚಿದ್ದಾರೆ ಎಂಬುದನ್ನು ಪರಿಶೀಲಿಸುತ್ತೇನೆ’ ಎಂದು ಸಹಾಯಕ ಚುನಾವಣಾಧಿಕಾರಿ ಎಂ.ಆರ್.ರಾಜೇಶ್ ಹೇಳಿದರು.