‘ಎಂದಿನಂತೆ ಭಾನುವಾರ ಅಂಗಡಿಗೆ ಬಂದು ಕೆಲಸ ಮಾಡುತ್ತಿದ್ದರು. ಬೈಕ್ನಲ್ಲಿ ಅಂಗಡಿ ಬಳಿ ರಾತ್ರಿ ಬಂದಿದ್ದ ದುಷ್ಕರ್ಮಿಗಳಿಬ್ಬರು, ಅಂಗಡಿಯೊಳಗೆ ನುಗ್ಗಿ ಉಮೇಶ್ ಮೇಲೆ ಮಚ್ಚು ಬೀಸಿದ್ದರು. ತಪ್ಪಿಸಿಕೊಂಡು ಓಡಲಾರಂಭಿಸಿದಾಗ ಬೆನ್ನಟ್ಟಿ ಮಚ್ಚಿನಿಂದ ಹೊಡೆದಿದ್ದರು. ಅಂಗಡಿ ಎದುರೇ ನರಳುತ್ತ ಬಿದ್ದಿದ್ದ ಉಮೇಶ್, ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ’ ಎಂದು ರಾಜಗೋಪಾಲನಗರ ಪೊಲೀಸರು ಹೇಳಿದರು.