ಜಿಲ್ಲೆಯೊಂದಿಗೆ ಮುತ್ತಪ್ಪ ರೈ ಒಡನಾಟ ಇರಿಸಿಕೊಂಡಿದ್ದರು. ಕುಶಾಲನಗರದ ಸುತ್ತಮುತ್ತ ಅವರಿಗೆ ಸೇರಿದ ಆಸ್ತಿಯಿದೆ. ಕ್ಯಾನ್ಸರ್ಗೆ ತುತ್ತಾಗುವ ಮೊದಲು ಜಿಲ್ಲೆಗೆ ಆಗಾಗ್ಗೆ ಭೇಟಿ ಕೊಡುತ್ತಿದ್ದರು. ಕೊಡಗಿನಲ್ಲಿ ಜಯ ಕರ್ನಾಟಕ ಸಂಘಟನೆ ಬೆಳೆಸುವ ಕನಸು ಕಂಡಿದ್ದರು. ವಿರಾಜಪೇಟೆ ಹಾಗೂ ನಾಪೋಕ್ಲು ಭಾಗದಲ್ಲಿ ಸಂಘಟನೆ ಸಕ್ರಿಯವಾಗಿದೆ.2018ರಲ್ಲಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದ ಸಂಭವಿಸಿದಾಗ ಸಾಕಷ್ಟು ನೆರವು ನೀಡಿದ್ದರು. ಜಿಲ್ಲೆಯಿಂದ ಯಾರೇ ಬಿಡದಿಯ ನಿವಾಸಕ್ಕೆ ಹೋದರೂ ಕೊಡಗಿನ ಖಾದ್ಯಗಳನ್ನೇ ಮಾಡಿಸಿ ಬಡಿಸುತ್ತಿದ್ದರು ಎಂದು ಆತ್ಮೀಯರೊಬ್ಬರು ‘ಪ್ರಜಾವಾಣಿ’ಗೆ ಎದುರು ನೆನಪು ಮಾಡಿಕೊಂಡರು.