ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾಗೇಂದ್ರಗೆ ವಾರ್ನಿಂಗ್ ಮಾಡಿಲ್ಲ. ಅಣ್ಣ–ತಮ್ಮನ ನಡುವೆ ಭಿನ್ನಾಭಿಪ್ರಾಯ ಇರುತ್ತವೆ. ಅವರಣ್ಣ ಬಿಜೆಪಿಗೆ ಹೋದರೆ ನಾಗೇಂದ್ರ ಹೋಗುತ್ತಾರೆ ಎಂದರ್ಥವಲ್ಲ. ಮನುಷ್ಯ ತಪ್ಪು ಮಾಡೋದು ಸಹಜ. ನಾಗೇಂದ್ರ ನಮ್ಮ ಮನೆ ಹುಡುಗ. ನಾನು ಅವರನ್ನು ಭೇಟಿ ಮಾಡುತ್ತೇನೆ. ಉಗ್ರಪ್ಪ ಅವರು ನಾಮಪತ್ರ ಸಲ್ಲಿಸುವ ವೇಳೆ ಅವರು ಬರುತ್ತಾರೆ’ ಎಂದರು.