ಯೋಧರಾದ ಸುಬೇದಾರ್ ರಮೇಶ್ ಖಂಡಪ್ಪ ಪೊಲೀಸ್ ಪಾಟೀಲ್, ಲೆಫ್ಟಿನೆಂಟ್ ಕರ್ನಲ್ ಸಿ.ಎನ್.ನಂಜಪ್ಪ ಯುದ್ಧದಲ್ಲಿ ಮಡಿದವರು. ಇವರ ಪತ್ನಿಯರಾದ ಲಕ್ಷ್ಮಿ ಪಾಟೀಲ್, ಪಿ.ಪಿ.ಕವಿತಾ ಅವರಿಗೆ ಬೆಂಗಳೂರಿನ ಬಿನ್ನಮಂಗಲ 2ನೇ ಹಂತದ ಬಡಾವಣೆಯಲ್ಲಿ ನಿವೇಶನ ನೀಡುವಂತೆ ಸರ್ಕಾರ ಆದೇಶಿಸಿದೆ. ಇವರ ಜತೆಗೆ ಕವಿತಾ, ಆಶಾ, ಉಷಾಎಂಬುವವರಿಗೂ ನಿವೇಶನ ನೀಡಬೇಕಿದೆ. ಆದರೆ, ಇದುವರೆಗೆ ನಿವೇಶನ ಸಿಕ್ಕಿಲ್ಲ. ಪ್ರತಿನಿತ್ಯ ಕಚೇರಿ ಬಾಗಿಲು ಮುಂದೆ ನಿಲ್ಲುವಂತೆ ಆಗಿದೆ.