ಮಾರ್ಚ್ 1ರಂದು ಕಲಬುರ್ಗಿ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ಅವರು ಪಠಾಣ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದರು. ಠಾಣೆಯ ಪಿಎಸ್ಐ ಮುಂಬೈಗೆ ಖುದ್ದು ತೆರಳಿ ನೋಟಿಸ್ ತಲುಪಿಸಿದ್ದರು. ಆದಾಗ್ಯೂ, ಪಠಾಣ್ ವಿಚಾರಣೆಗೆ ಬಂದಿಲ್ಲ. ಹೀಗಾಗಿ, ಪೊಲೀಸರು ಮತ್ತೊಂದು ನೋಟಿಸ್ ಜಾರಿಗೊಳಿಸಿದ್ದು, ಮಾ 8ರಂದು ಹಾಜರಾಗುವಂತೆ ಪಠಾಣ್ ಸೇರಿದಂತೆ 14 ಜನರಿಗೆ ಸೂಚಿಸಿದ್ದೇವೆ. ಅವರೆಲ್ಲರನ್ನು ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದ್ದೇವೆ ಎಂದು ಕಲಬುರ್ಗಿ ಪೊಲೀಸ್ ಕಮಿಷನರ್ ಎಂ.ಎನ್.ನಾಗರಾಜ ತಿಳಿಸಿದ್ದಾರೆ.