‘ಶಾಲೆಗಳಲ್ಲಿ ಬೆಳಗಿನ ಉಪಾಹಾರ ನೀಡಲು ಈಗಾಗಲೇ ಹಲವು ಟ್ರಸ್ಟ್ಗಳು ಸಹಯೋಗ ನೀಡಿವೆ. ಇದೇ ಕ್ರಮವನ್ನು ರಾಜ್ಯದಾದ್ಯಂತ ಜಾರಿಗೆ ತರುವ ಉದ್ದೇಶವಿದೆ. ಮಕ್ಕಳ ಸಂಖ್ಯೆ, ವೆಚ್ಚದ ಲೆಕ್ಕಾಚಾರ ಮಾಡಿ ಕೊನೆಯ ನಿರ್ಧಾರ ಮಾಡುತ್ತೇವೆ. ಜತೆಗೆ, ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪದವಿಪೂರ್ವ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು ಎಂಬ ಬೇಡಿಕೆ ಬಂದಿದೆ. ಇದನ್ನೂ ಸಕಾರಾತ್ಮಕವಾಗಿಯೇ ತೆಗೆದುಕೊಂಡಿದ್ದೇವೆ’ ಎಂದು ಸಚಿವರು ತಿಳಿಸಿದರು.