ಪಾವಗಡ: ತಾಲ್ಲೂಕಿನ ಬಂಡೆ ಅಚ್ಚಮ್ಮನಹಳ್ಳಿ ಬಳಿ ಕೊಲೆ ಆರೋಪಿಗಳು ಬಚ್ಚಿಟ್ಟಿದ್ದ ಕಚ್ಚಾ ಬಾಂಬ್ಗಳನ್ನು ಆಂಧ್ರದ ಕಂಬದೂರು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.
ನಕ್ಸಲರ ಹೆಸರಲ್ಲಿ ಜನರನ್ನು ಹೆದರಿಸುತ್ತಿದ್ದಕನಿಕಲಬಂಡೆ ವೆಂಕಟೇಶ್, ರಾಮಾಂಜಿ ಎಂಬಾತನ ಜತೆ ಸೇರಿಆಂಧ್ರದ ರಾಳ್ಳಪಲ್ಲಿಯಲ್ಲಿ ₹1 ಲಕ್ಷ ಸುಪಾರಿ ಪಡೆದು ಬಂಡೆ ಸ್ಫೋಟಿಸುವ ಕೇಪ್ ಬಳಸಿ ಈಚೆಗೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದ.
ಈ ಇಬ್ಬರನ್ನೂ ಕೆಲ ದಿನಗಳ ಹಿಂದೆ ಆಂಧ್ರ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ವೆಂಕಟೇಶ್, ಏರ್ ಪಿಸ್ತೂಲ್ ಮತ್ತು ಕಚ್ಚಾ ಬಾಂಬ್ ಅವಿತಿಟ್ಟಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ.
ಆರೋಪಿಯನ್ನು ಕರೆತಂದು ಬಂಡೆ ಅಚ್ಚಮ್ಮನಹಳ್ಳಿ ಬಳಿಯ ತೋಟದಲ್ಲಿ ಬಚ್ಚಿಟ್ಟಿದ್ದ 2 ಕಚ್ಚಾ ಬಾಂಬ್, 2 ಏರ್ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.