ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ಕಚ್ಚಾ ಬಾಂಬ್‌ ವಶ

Last Updated 18 ಫೆಬ್ರುವರಿ 2019, 19:08 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ಬಂಡೆ ಅಚ್ಚಮ್ಮನಹಳ್ಳಿ ಬಳಿ ಕೊಲೆ ಆರೋಪಿಗಳು ಬಚ್ಚಿಟ್ಟಿದ್ದ ಕಚ್ಚಾ ಬಾಂಬ್‌ಗಳನ್ನು ಆಂಧ್ರದ ಕಂಬದೂರು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.

ನಕ್ಸಲರ ಹೆಸರಲ್ಲಿ ಜನರನ್ನು ಹೆದರಿಸುತ್ತಿದ್ದಕನಿಕಲಬಂಡೆ ವೆಂಕಟೇಶ್, ರಾಮಾಂಜಿ ಎಂಬಾತನ ಜತೆ ಸೇರಿಆಂಧ್ರದ ರಾಳ್ಳಪಲ್ಲಿಯಲ್ಲಿ ₹1 ಲಕ್ಷ ಸುಪಾರಿ ಪಡೆದು ಬಂಡೆ ಸ್ಫೋಟಿಸುವ ಕೇಪ್ ಬಳಸಿ ಈಚೆಗೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದ.

ಈ ಇಬ್ಬರನ್ನೂ ಕೆಲ ದಿನಗಳ ಹಿಂದೆ ಆಂಧ್ರ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ವೆಂಕಟೇಶ್, ಏರ್ ಪಿಸ್ತೂಲ್ ಮತ್ತು ಕಚ್ಚಾ ಬಾಂಬ್ ಅವಿತಿಟ್ಟಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ.

ಆರೋಪಿಯನ್ನು ಕರೆತಂದು ಬಂಡೆ ಅಚ್ಚಮ್ಮನಹಳ್ಳಿ ಬಳಿಯ ತೋಟದಲ್ಲಿ ಬಚ್ಚಿಟ್ಟಿದ್ದ 2 ಕಚ್ಚಾ ಬಾಂಬ್, 2 ಏರ್ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT