ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಏಳು ಸಹಕಾರಿ ಹಾಗೂ ಎರಡು ಖಾಸಗಿ ಕಾರ್ಖಾನೆಗಳು, ಕಬ್ಬು ಬೆಳೆಗಾರರ ₹ 1,045 ಕೋಟಿಯನ್ನು ಬಾಕಿ ಉಳಿಸಿಕೊಂಡಿವೆ. ಕಾರ್ಖಾನೆಗಳಿಂದ ₹ 200 ಕೋಟಿ ವಿದ್ಯುತ್ ಬಿಲ್ ಬರಬೇಕಿದ್ದು, ಸದ್ಯ ಅದನ್ನೂ ಬದಿಗಿರಿಸಿದ್ದೇವೆ. ಸರ್ಕಾರ ಸಹಕಾರ ನೀಡಿದರೂ, ಮಾಲೀಕರು ರೈತರ ಹಣ ಬಾಕಿ ಇಟ್ಟುಕೊಂಡಿರುವುದು ಸರಿಯಲ್ಲ’ ಎಂದರು.