<p><strong>ಮೈಸೂರು:</strong> ಮೂಲ ದಾಖಲಾತಿಗಳ ಪರಿಶೀಲನೆ ಮುಗಿದು ವರ್ಷವಾದರೂ, ಅಂತಿಮ ಪಟ್ಟಿ ಪ್ರಕಟಗೊಂಡು ನೇಮಕಾತಿ ಆದೇಶ ಕೈ ಸೇರದಿರುವುದು ‘ತೋಟಗಾರ’ ಉದ್ಯೋಗಾಕಾಂಕ್ಷಿಗಳಲ್ಲಿ ಭ್ರಮನಿರಸನ ಮೂಡಿಸಿದೆ.</p>.<p>ಹಲವು ವರ್ಷಗಳ ಬಳಿಕ ತೋಟಗಾರಿಕೆ ಇಲಾಖೆಯು 200 ತೋಟಗಾರರ ನೇಮಕಾತಿಗಾಗಿ 2019ರ ಜನವರಿಯಲ್ಲಿ ಅಧಿಸೂಚನೆ ಹೊರಡಿಸಿತ್ತು. ಆ ಪೈಕಿ, 128 ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಾಗಿದ್ದವು. ‘ಡಿ’ ದರ್ಜೆಯ ಈ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿ, ತೋಟಗಾರಿಕೆ ಇಲಾಖೆಯಿಂದ ನೀಡುವ 10 ತಿಂಗಳ ಅವಧಿಯ ‘ತೋಟಗಾರ’ ತರಬೇತಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿತ್ತು.</p>.<p>ಅದೇ ವರ್ಷ ಜುಲೈನಲ್ಲಿ, ಕಲ್ಯಾಣ ಕರ್ನಾಟಕದ 147 ಹಾಗೂ ಮೂಲ ವೃಂದದ ಪೈಕಿ 92 ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ ಪ್ರಕ್ರಿಯೆಯೂ ನಡೆದಿತ್ತು. ಇದಾಗಿ ವರ್ಷ ಮುಗಿಯುತ್ತಾ ಬಂದರೂ, ನೇಮಕಾತಿ ಆದೇಶ ಹೊರ ಬೀಳದಿರುವುದು ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ.</p>.<p>‘ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಹುದ್ದೆಯಿರುವ ಕಾರಣಕ್ಕಾಗಿಯೇ ವಿಳಂಬ ಮಾಡಲಾಗುತ್ತಿದೆ ಎಂಬ ಅನುಮಾನ ಈಚೆಗೆ ಕಾಡಲಾರಂಭಿಸಿದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೊಪ್ಪಳ ಜಿಲ್ಲೆಯ ಉದ್ಯೋಗಾಕಾಂಕ್ಷಿಯೊಬ್ಬರು.</p>.<p>‘ನಾನೊಬ್ಬ 33 ವರ್ಷದ ರೈತ. ಇನ್ನೂ ಮದುವೆಯಾಗಿಲ್ಲ. ಈ ಉದ್ಯೋಗವಾದರೂ ಸಿಕ್ಕರೆ ಮದುವೆಯಾಗಬಹುದು ಎಂಬ ನಿರೀಕ್ಷೆಯಲ್ಲೇ ದಿನ ಕಳೆಯುತ್ತಿದ್ದೇನೆ’ ಎಂದು ಮೈಸೂರು ಜಿಲ್ಲೆಯ ಆಕಾಂಕ್ಷಿಯೊಬ್ಬರು ‘ಪ್ರಜಾವಾಣಿ’ ಬಳಿ ಅಲವತ್ತುಕೊಂಡರು.</p>.<p>‘ದಾಖಲಾತಿ ಪರಿಶೀಲನೆ ಬಳಿಕ ಸರ್ಕಾರಿ ಕೆಲಸ ಸಿಗುತ್ತದೆ ಎಂದು ಹೇಳಿ, ನಮ್ಮ ತಂದೆ ಉದ್ಯೋಗಸ್ಥರೊಬ್ಬರ ಜೊತೆ ಮದುವೆ ಮಾಡಿದರು. ಆದರೆ, ಇದುವರೆಗೂ ಪಟ್ಟಿಯೇ ಪ್ರಕಟವಾಗಿಲ್ಲ. ನನಗೆ ಆತಂಕವಾಗುತ್ತಿದೆ’ ಎಂದು ಬಳ್ಳಾರಿ ಜಿಲ್ಲೆಯ ಮಹಿಳಾ ಅಭ್ಯರ್ಥಿಯೊಬ್ಬರು ತಿಳಿಸಿದರು.</p>.<p>‘ಎಲೆಕೋಸು ಬೆಳೆದಿದ್ದ ನಾನು, ಕೋವಿಡ್ ಸಂಕಷ್ಟದಿಂದಾಗಿ ₹2 ಲಕ್ಷ ನಷ್ಟ ಅನುಭವಿಸಿದೆ. ಕೃಷಿಗಾಗಿ ತಂದೆ ಮಾಡಿದ್ದ ₹3 ಲಕ್ಷ ಸಾಲವಿದೆ. ಈ ನೌಕರಿ ಸಿಕ್ಕಿದರೆ ಬದುಕಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಮಂಡ್ಯ ಜಿಲ್ಲೆಯ ಉದ್ಯೋಗಾಕಾಂಕ್ಷಿ. ಅಂತಿಮ ಪಟ್ಟಿಯ ನಿರೀಕ್ಷೆಯಲ್ಲಿರುವ ಈ ಯಾರೊಬ್ಬರೂ ತಮ್ಮ ಹೆಸರನ್ನು ಬಹಿರಂಗಪಡಿಸಲು ಬಯಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಮೂಲ ದಾಖಲಾತಿಗಳ ಪರಿಶೀಲನೆ ಮುಗಿದು ವರ್ಷವಾದರೂ, ಅಂತಿಮ ಪಟ್ಟಿ ಪ್ರಕಟಗೊಂಡು ನೇಮಕಾತಿ ಆದೇಶ ಕೈ ಸೇರದಿರುವುದು ‘ತೋಟಗಾರ’ ಉದ್ಯೋಗಾಕಾಂಕ್ಷಿಗಳಲ್ಲಿ ಭ್ರಮನಿರಸನ ಮೂಡಿಸಿದೆ.</p>.<p>ಹಲವು ವರ್ಷಗಳ ಬಳಿಕ ತೋಟಗಾರಿಕೆ ಇಲಾಖೆಯು 200 ತೋಟಗಾರರ ನೇಮಕಾತಿಗಾಗಿ 2019ರ ಜನವರಿಯಲ್ಲಿ ಅಧಿಸೂಚನೆ ಹೊರಡಿಸಿತ್ತು. ಆ ಪೈಕಿ, 128 ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಾಗಿದ್ದವು. ‘ಡಿ’ ದರ್ಜೆಯ ಈ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿ, ತೋಟಗಾರಿಕೆ ಇಲಾಖೆಯಿಂದ ನೀಡುವ 10 ತಿಂಗಳ ಅವಧಿಯ ‘ತೋಟಗಾರ’ ತರಬೇತಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿತ್ತು.</p>.<p>ಅದೇ ವರ್ಷ ಜುಲೈನಲ್ಲಿ, ಕಲ್ಯಾಣ ಕರ್ನಾಟಕದ 147 ಹಾಗೂ ಮೂಲ ವೃಂದದ ಪೈಕಿ 92 ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ ಪ್ರಕ್ರಿಯೆಯೂ ನಡೆದಿತ್ತು. ಇದಾಗಿ ವರ್ಷ ಮುಗಿಯುತ್ತಾ ಬಂದರೂ, ನೇಮಕಾತಿ ಆದೇಶ ಹೊರ ಬೀಳದಿರುವುದು ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ.</p>.<p>‘ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಹುದ್ದೆಯಿರುವ ಕಾರಣಕ್ಕಾಗಿಯೇ ವಿಳಂಬ ಮಾಡಲಾಗುತ್ತಿದೆ ಎಂಬ ಅನುಮಾನ ಈಚೆಗೆ ಕಾಡಲಾರಂಭಿಸಿದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೊಪ್ಪಳ ಜಿಲ್ಲೆಯ ಉದ್ಯೋಗಾಕಾಂಕ್ಷಿಯೊಬ್ಬರು.</p>.<p>‘ನಾನೊಬ್ಬ 33 ವರ್ಷದ ರೈತ. ಇನ್ನೂ ಮದುವೆಯಾಗಿಲ್ಲ. ಈ ಉದ್ಯೋಗವಾದರೂ ಸಿಕ್ಕರೆ ಮದುವೆಯಾಗಬಹುದು ಎಂಬ ನಿರೀಕ್ಷೆಯಲ್ಲೇ ದಿನ ಕಳೆಯುತ್ತಿದ್ದೇನೆ’ ಎಂದು ಮೈಸೂರು ಜಿಲ್ಲೆಯ ಆಕಾಂಕ್ಷಿಯೊಬ್ಬರು ‘ಪ್ರಜಾವಾಣಿ’ ಬಳಿ ಅಲವತ್ತುಕೊಂಡರು.</p>.<p>‘ದಾಖಲಾತಿ ಪರಿಶೀಲನೆ ಬಳಿಕ ಸರ್ಕಾರಿ ಕೆಲಸ ಸಿಗುತ್ತದೆ ಎಂದು ಹೇಳಿ, ನಮ್ಮ ತಂದೆ ಉದ್ಯೋಗಸ್ಥರೊಬ್ಬರ ಜೊತೆ ಮದುವೆ ಮಾಡಿದರು. ಆದರೆ, ಇದುವರೆಗೂ ಪಟ್ಟಿಯೇ ಪ್ರಕಟವಾಗಿಲ್ಲ. ನನಗೆ ಆತಂಕವಾಗುತ್ತಿದೆ’ ಎಂದು ಬಳ್ಳಾರಿ ಜಿಲ್ಲೆಯ ಮಹಿಳಾ ಅಭ್ಯರ್ಥಿಯೊಬ್ಬರು ತಿಳಿಸಿದರು.</p>.<p>‘ಎಲೆಕೋಸು ಬೆಳೆದಿದ್ದ ನಾನು, ಕೋವಿಡ್ ಸಂಕಷ್ಟದಿಂದಾಗಿ ₹2 ಲಕ್ಷ ನಷ್ಟ ಅನುಭವಿಸಿದೆ. ಕೃಷಿಗಾಗಿ ತಂದೆ ಮಾಡಿದ್ದ ₹3 ಲಕ್ಷ ಸಾಲವಿದೆ. ಈ ನೌಕರಿ ಸಿಕ್ಕಿದರೆ ಬದುಕಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಮಂಡ್ಯ ಜಿಲ್ಲೆಯ ಉದ್ಯೋಗಾಕಾಂಕ್ಷಿ. ಅಂತಿಮ ಪಟ್ಟಿಯ ನಿರೀಕ್ಷೆಯಲ್ಲಿರುವ ಈ ಯಾರೊಬ್ಬರೂ ತಮ್ಮ ಹೆಸರನ್ನು ಬಹಿರಂಗಪಡಿಸಲು ಬಯಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>