ಈ ಹಿಂದೆಯೂ ಅನೇಕ ಬಾರಿ ಕೆರೆ ಕೋಡಿಯಲ್ಲಿ ಭಾರಿ ಪ್ರಮಾಣದ ನೊರೆ ಉಂಟಾಗಿತ್ತು. ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆ ಆಗಿತ್ತು. ಹೀಗಾಗಿ, ನೊರೆಯು ರಸ್ತೆಗೆ ಹಾರದಂತೆ ತಡೆಗಟ್ಟಲು ಜಾಲರಿ ಅಳವಡಿಸಲಾಗಿತ್ತು. ನೊರೆ ಪ್ರಮಾಣ ಹೆಚ್ಚಾಗದಂತೆ ತಡೆಯಲು ಸ್ಪ್ರಿಂಕ್ಲರ್ಗಳನ್ನು ಹಾಕಲಾಗಿತ್ತು. ಆದರೆ, ಕೆ.ಸಿ. ಕಣಿವೆ ಯೋಜನೆಯ ಕಾಮಗಾರಿ ನಡೆಯುತ್ತಿರುವುದರಿಂದ ಜಾಲರಿಯನ್ನು ತೆಗೆಯಲಾಗಿದೆ. ಸ್ಪ್ರಿಂಕ್ಲರ್ಗಳ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಇದು ಕೂಡಾ ನೊರೆಯ ಪ್ರಮಾಣ ಹೆಚ್ಚಲು ಕಾರಣ.