‘ಕ್ವಿಜ್ಗಾಗಿ ಸಾಮಾನ್ಯ ಜ್ಞಾನ ಪುಸ್ತಕಗಳನ್ನು ಓದಿಕೊಂಡಿದ್ದೆವು. ಆದರೆ, ಇಲ್ಲಿ ನಮ್ಮ ಊಹೆಗೂ ಮೀರಿ ಬೇರೆ ಬೇರೆ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು. ನಮ್ಮ ತಯಾರಿಯಲ್ಲಿ ಕೊರತೆ ಇದೆ. ಫೈನಲ್ವರೆಗೂ ಬಂದು ಗೆಲ್ಲಲಾಗಲಿಲ್ಲ ಎಂಬ ಬೇಸರ ಇದೆ. ಆದರೆ, ಈ ಬಾರಿ ಕೆಲ ವಿಷಯಗಳನ್ನು ಕಲಿತುಕೊಂಡಿದ್ದೇವೆ. ಇದು ಭವಿಷ್ಯದಲ್ಲಿ ಪ್ರಶಸ್ತಿ ಗೆಲ್ಲಲು ನೆರವಾಗಲಿದೆ’ ಎಂದುಹತ್ತನೇ ಸ್ಥಾನಗಳಿಸಿದ ತುಮಕೂರಿನ ವಿದ್ಯಾನಿಕೇತನ ಪ್ರೌಢ ಶಾಲೆಯ ನಾಗಭೂಷಣ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.