ಅಂದಿನ ಪುರಸಭೆಯು ಎಂಟು ವರ್ಷದ ಹಿಂದೆ ಪ್ರತ್ಯೇಕವಾಗಿ ಬುಡ್ಗ ಜಂಗಮ, ಶಿಳ್ಯಾಕ್ಯಾತರು, ಬೈಲ್ ಪತ್ತಾರ, ಕುಂಚುಕೊರುವರು, ಮೀನುಗಾರರು, ಚೆನ್ನದಾಸರು ಬಡ ಕುಟುಂಬಗಳಿಗೆ ಸರ್ಕಾರದಿಂದ ಆಶ್ರಯ ಯೋಜನೆ ಅಡಿಯಲ್ಲಿ ಸುಮಾರು 300 ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಬಯಲು ಜಾಗದಲ್ಲಿ ಗುಡಿಸಲು, ತಾತ್ಕಾಲಿಕ ಶೆಡ್ ಹಾಕಿಕೊಂಡು ಕುಟುಂಬಗಳು ನೆಲೆಕಂಡಿವೆ.