ತಾಲ್ಲೂಕಿನ ಕಳಾಸಪುರದ ಮನೆಯೊಂದರಲ್ಲಿ ಗುರುವಾರ ರೈತರೊಂದಿಗೆ ಮಾತನಾಡಿದರು. ‘ರಾಜಕಾರಣಿಗಳು ಊರಿಗೆ ಬಂದು ಸಮಸ್ಯೆ ಪರಿಹಾರಿಸುತ್ತಾರೆ ಎಂಬುದು ಸುಳ್ಳು. ಆಶ್ವಾಸನೆ ಬೇಡ, ಕೆಲಸ ಮಾಡಿ ತೋರಿಸಿ ಎಂದು ಅವರಿಗೆ ಷರತ್ತು ಹಾಕಬೇಕು. ನಮ್ಮ ಊರಿಗೆ, ಈ ಭಾಗದ ಜನರಿಗೆ ಏನು ಬೇಕು ಎಂಬುದರ ಬಗ್ಗೆ ಮೊದಲು ನಮಗೆ ಸ್ಪಷ್ಟತೆ ಇರಬೇಕು. ಬದುಕುವ ದಾರಿಯನ್ನು ನಾವೇ ಹುಡುಕಿಕೊಳ್ಳಬೇಕು’ ಎಂದು ಸಲಹೆ ನೀಡಿದರು.