ರಾಮನಗರ: ಹುತಾತ್ಮ ಯೋಧ ಗುರು ಅವರ ಶವವನ್ನು ಮಿಲಿಟರಿ ವಾಹನದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮದ್ದೂರಿಗೆ ಕೊಂಡೊಯ್ಯಲಾಗುತ್ತಿದೆ.
ಜನರು ಹೆದ್ದಾರಿಯ ಬದಿ ಅಲ್ಲಲ್ಲಿ ನಿಂತು ಪುಷ್ಪ ನಮನ ಸಲ್ಲಿಸುತ್ತಿದ್ದಾರೆ. ಕುಂಬಳಗೂಡು, ವಂಡರ್ ಲಾ ಗೇಟ್, ಬಿಡದಿ, ರಾಮನಗರ ಹಾಗೂ ಚನ್ನಪಟ್ಟಣದ ವಿವಿಧೆಡೆ ಸಾವಿರಾರು ಜನರು ನಿಂತು ಮೃತ ಯೋಧನ ಅಂತಿಮ ದರ್ಶನ ಪಡೆಯುತ್ತಿದ್ದಾರೆ.