ಶಾಸಕ ವೆಂಕಟರಮಣಪ್ಪ ಪ್ರತಿಕ್ರಿಯಿಸಿ, ಗುತ್ತಿಗೆದಾರರ ನಡುವಿನ ಸಮಸ್ಯೆಯಿಂದ ಸ್ಥಗಿತಗೊಳಿಸಿರಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲ. ನಮ್ಮ ಕ್ರಶರ್ ಜಲ್ಲಿಯನ್ನೇ ಕೊಂಡುಕೊಳ್ಳಿ ಎಂದು ಎಲ್ಲಿಯೂ ಒತ್ತಾಯ ಹೇರಿಲ್ಲ. ಕಾಮಗಾರಿ ನಡೆಸುವ ಮಾರ್ಗದಲ್ಲಿ ಅಡ್ಡ ಬರುವ ಕಲ್ಲು, ಗುಟ್ಟೆಗಳನ್ನು ತೆರವುಗೊಳಿಸಲು ಅವಕಾಶವಿದೆ. ಆದರೆ ಜಲ್ಲಿಗಾಗಿ ಕಾನೂನು ಬಾಹಿರವಾಗಿ ಬಂಡೆಗಳನ್ನು ಸ್ಪೋಟಿಸುವಂತಿಲ್ಲ. ಚಲಿಸುವ ಜಲ್ಲಿ ಯಂತ್ರಗಳನ್ನು ಬಳಸುವಂತಿಲ್ಲ ಎಂದರು.