ಮಲಹೊರುವ ಪೌರಕಾರ್ಮಿಕರ ಪುನರ್ವಸತಿಗೆ ಕೇಂದ್ರ ಸರ್ಕಾರವು ‘ಮಲಹೊರುವವರ ಪುನರ್ವಸತಿಗಾಗಿ ಸ್ವಉದ್ಯೋಗ ಯೋಜನೆ’ಯನ್ನು ರೂಪಿಸಿದೆ. ಇದಕ್ಕಾಗಿ ದೇಶದಾದ್ಯಂತ ಸಮೀಕ್ಷೆ ನಡೆಸಿ, ಪೌರಕಾರ್ಮಿಕರನ್ನೂ ಗುರುತಿಸಲಾಗಿದೆ. ಆದರೆ, ಈ ಯೋಜನೆ ಅಡಿ ಕೌಶಲ ತರಬೇತಿ ಪಡೆದವರ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇದೆ.ಈ ಪೌರಕಾರ್ಮಿಕರ ಪುನರ್ವಸತಿ ಕನಸಾಗಿಯೇ ಉಳಿದಿದೆ.