‘ಪತ್ರಿಕೆಗೆ ಲೇಖನಗಳು, ಲೇಖಕರು ಮತ್ತು ಓದುಗರ ಕೊರತೆ ಇಲ್ಲ. ಇರುವ 3,000 ಚಂದಾದಾರರಲ್ಲಿ 1,500 ಜನರಿಂದ ₹ 5 ಲಕ್ಷ ಬಾಕಿ ಉಳಿದಿದೆ. ಚಂದಾ ಕೊಟ್ಟರಾಯಿತು, ಬಿಟ್ಟರಾಯಿತು ಎಂದು ಆಲಸ್ಯ ಮಾಡುತ್ತಿದ್ದಾರೆ. ದುಡ್ಡಿನ ಸಮಸ್ಯೆ ಜಾಸ್ತಿಯಾಗಿದೆ. ಎಲ್ಲ ಹೊಡೆತ ತಡೆಯಬಹುದು, ಆದರೆ, ದುಡ್ಡಿನ ಹೊಡೆತ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ಹಾಗಾಗಿ ಪತ್ರಿಕೆ ನಿಲ್ಲಿಸುವುದು ಅನಿವಾರ್ಯವಾಗಿದೆ’ ಎಂದರು ಚಂಪಾ.