ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 10–5–1968

Last Updated 9 ಮೇ 2018, 19:30 IST
ಅಕ್ಷರ ಗಾತ್ರ

* ಗಡಿ ವಿವಾದದ ಬಗ್ಗೆ ಹೊಸ ತತ್ವ
ಬೆಂಗಳೂರು, ಮೇ 9–
ಮೈಸೂರು– ಮಹಾರಾಷ್ಟ್ರ– ಕೇರಳ ಗಡಿ ವಿವಾದಗಳನ್ನು ಪರಿಹರಿಸಲು ಕೇಂದ್ರ ಸರಕಾರ ‘ಹೊಸ ತತ್ವಗಳನ್ನು’ ನಿರೂ‍ಪಿಸಿದೆಯೆಂಬ ದೆಹಲಿ ವರದಿ ಇಲ್ಲಿನ ಸರಕಾರಿ ವಲಯಗಳಲ್ಲಿ ಅತ್ಯಾಶ್ಚರ್ಯವನ್ನುಂಟು ಮಾಡಿದೆ.

5000 ಜನಸಂಖ್ಯೆಯಿರುವ ಗ್ರಾಮ ಅಥವಾ ಗ್ರಾಮಗಳ ತಂಡವನ್ನು ಗಡಿ ಪುನರ್‌ ವ್ಯವಸ್ಥೆಗಾಗಿ ಒಂದು ಯೂನಿಟ್ ಎಂದು ಪರಿಗಣಿಸುವುದು (20 ಸಾವಿರ ಜನಸಂಖ್ಯೆಯ ಗ್ರಾಮಗಳ ತಂಡವನ್ನು ಮಹಾಜನ್ ಒಂದು ಯೂನಿಟ್ ಎಂದು ಪರಿಗಣಿಸಿದ್ದರು). ಈ ಘಟಕದಲ್ಲಿ ಶೇಕಡಾ 55 ರಷ್ಟು ಜನರು ಮಾತನಾಡುವ ಭಾಷೆಯ ರಾಜ್ಯಕ್ಕೆ ಆ ಘಟಕವನ್ನು ಸೇರಿಸಬೇಕು.

* ಟಿ. ಶಾಮಣ್ಣ ನೂತನ ಕೈಗಾರಿಕಾ ಕಮಿಷನರ್
ಬೆಂಗಳೂರು, ಮೇ 9–
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಡೈರಕ್ಟರ್ ಶ್ರೀ ಟಿ. ಶಾಮಣ್ಣನವರನ್ನು ರಾಜ್ಯದ ಕೈಗಾರಿಕಾ ಕಮಿಷನರ್ ಆಗಿ ನೇಮಿಸಲಾಗಿದೆ. ಈ ಹುದ್ದೆಯನ್ನು ಹೊಸದಾಗಿ ಸೃಷ್ಟಿಸಲಾಗಿದೆ. ಆಹಾರ ಇಲಾಖೆಯ ಡೈರಕ್ಟರ್ ಆಗಿದ್ದ ಶ್ರೀ ಮಣಿನಾರಾಯಣ ಸ್ವಾಮಿ ಅವರನ್ನು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಡೈರಕ್ಟರ್ ಆಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT