‘ಸುಮಾರು 13 ವರ್ಷಗಳಿಂದ 1ರಿಂದ 8ನೇ ತರಗತಿಗೆ ತಮ್ಮ ಸೇವಾ ಅನುಭವ ಹಾಗೂ ವಿದ್ಯಾರ್ಹತೆಯ ಆಧಾರದ ಮೇಲೆ ಬೋಧನೆ ಮಾಡುತ್ತ ಬಂದಿರುವಶಿಕ್ಷಕರಿಗೆ ಇದರಿಂದ ಅನ್ಯಾಯವಾಗಲಿದೆ. ಹೀಗಾಗಿ ಈ ಸುತ್ತೋಲೆಯನ್ನುಹಿಂಪಡೆಯಬೇಕು. ಸರ್ಕಾರ ತನ್ನ ನಿಲುವನ್ನು ಸಡಿಲಿಸದೆ ಇದ್ದರೆ6ರಿಂದ 8ನೇ ತರಗತಿಗೆ ಬೋಧನೆ ಮಾಡದೆ ಇರುವ ನಿರ್ಧಾರಕ್ಕೂ ಶಿಕ್ಷಕರು ಬರಬೇಕಾಗಬಹುದು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.