‘ಗುಂಡೂರಿನಲ್ಲಿ 8ನೇ ತರಗತಿಯಲ್ಲಿದ್ದಾಗಿಂದಲೇ ಗಾರೆ ಕೆಲಸ ಮಾಡುತ್ತಿದ್ದೆ. 2011ರಲ್ಲಿ ಪಿಯುಸಿ ಪಾಸಾಗುವ ಸಂದರ್ಭದಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದೆ. ಬಳಿಕ, ಕೆಲವು ತಿಂಗಳು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿದೆ. ಗಂಗಾವತಿಯಲ್ಲಿ ಪದವಿ ತರಗತಿಗೆ ಸೇರಿಕೊಂಡು, ಹಾಲು, ಪೇಪರ್ ಹಾಕುವ ಕೆಲಸ ಮಾಡಿದೆ. ನಂತರ ಸೆಕ್ಯುರಿಟಿಗಾರ್ಡ್ ಕೆಲಸಕ್ಕೆ ಸೇರಿಕೊಂಡೆ. ಬಿ.ಎ ಬಳಿಕ ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಬಿ.ಇಡಿಗೆ ಸೇರಿಕೊಂಡೆ. ನಂತರ ಗಂಗಾವತಿಯಲ್ಲಿ ಎಂ.ಎ.ಗೆ ಸೇರಿಕೊಂಡು, ಸೆಕ್ಯುರಿಟಿ ಕೆಲಸವನ್ನು ಮುಂದುವರಿಸಿದೆ’ ಎಂದು ಮಾಹಿತಿ ನೀಡಿದರು.