ಶಿವಮೊಗ್ಗ: ಮುಂಗಾರು ಮಳೆ ತಡವಾಗಿರುವ ಕಾರಣ ತುಂಗಾ ಅಣೆಕಟ್ಟಿನಲ್ಲಿ ನೀರು ಸಂಗ್ರಹ ತಳಮಟ್ಟ ತಲುಪಿದ್ದುಕುಡಿಯುವ ನೀರಿಗಾಗಿ ತೀವ್ರ ಅಭಾವ ತಲೆದೋರಿದೆ.
ಶಿವಮೊಗ್ಗ ನಗರಕ್ಕೆ ಅಗತ್ಯವಿರುವ ನೀರು ಪೂರೈಕೆಗಾಗಿಅಧಿಕಾರಿಗಳು ಖಾಸಗಿ ಟ್ಯಾಂಕರ್ಗಳ ಮೊರೆಹೋಗಿದ್ದಾರೆ. ತುಂಗಾ ಅಣೆಕಟ್ಟಿನಲ್ಲಿರುವ ಡೆಡ್ ಸ್ಟೋರೇಜ್ ನೀರನ್ನೇ ಕುಡಿಯುವ ಸಲುವಾಗಿ ಬಳಸಲಾಗುತ್ತಿದೆ. ಈ ನೀರನ್ನು ಬೇರೆ ಯಾವ ಉದ್ದೇಶಕ್ಕೂ ಬಳಸಲು ಸದ್ಯಕ್ಕೆ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂಗಾರು ತಡವಾಗಿರುವ ಕಾರಣ ಈ ಪರಿಸ್ಥಿತಿ ತಲೆದೋರಿದೆ. ಸಾರ್ವಜನಿಕರು ನೀರನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕು, ತುಂಗಾ ಅಣೆಕಟ್ಟೆಯ ನೀರನ್ನು ಕುಡಿಯಲು ಮಾತ್ರವೇ ಉಪಯೋಗಿಸಲಾಗುವುದು, ಬೇರೆ ಯಾವ ಉದ್ದೇಶಕ್ಕೂ ಬಳಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.