ಡೇರಿ, ಕೃಷಿ ಉತ್ಪನ್ನಗಳನ್ನು ವಿದೇಶಗಳಿಂದ ಆಮದು ಮಾಡಿ ಕೊಳ್ಳುವ ಅಗತ್ಯವಿಲ್ಲ. ಆಮದುಪ್ರಮಾಣ ಹೆಚ್ಚಾದರೆ ದೇಶಿ ಉತ್ಪನ್ನಗಳ ಬೆಲೆ ಕುಸಿದು, ರೈತರು ಬೀದಿಗೆ ಬರಬೇಕಾಗುತ್ತದೆ. ರೇಷ್ಮೆ ಬೆಳೆಯುವ ರೈತರಿಗೆ ಬಂದ ಸ್ಥಿತಿ ಇತರರಿಗೂ ಬರಲಿದೆ. ಒಪ್ಪಂದಕ್ಕೆ ಸಹಿ ಮಾಡುವ ಮುನ್ನ ಆರ್ಥಿಕ ತಜ್ಞರು, ಗ್ರಾಮೀಣ ಆರ್ಥಿಕ ಪರಿಣಿತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು ಎಂದರು.