‘ಕೆಡೆಟ್ ಬಾಲಕ/ಬಾಲಕಿಯರು, ಸಬ್ ಜೂನಿಯರ್ ಬಾಲಕ/ಬಾಲಕಿಯರು, ಜೂನಿಯರ್ ಬಾಲಕ/ಬಾಲಕಿಯರು, ಯುತ್ ಹಾಗೂ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಪ್ರತ್ಯೇಕ ಪಂದ್ಯಗಳು ನಡೆಯಲಿವೆ. ಇದೇ ‘11ರಂದು ಬೆಳಿಗ್ಗೆ 11ಕ್ಕೆ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ನಾಗಮೋಹನ್ ಚಾಲನೆ ಕೊಡುವರು. ಟೇಬಲ್ ಟೆನಿಸ್ ರಾಷ್ಟ್ರೀಯ ಚಾಂಪಿಯನ್ ಶರತ್ ಕಮಲ್, ಅರ್ಚನಾ ಕಾಮತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. 13ರಂದು ಸಂಜೆ 7ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಕೆ.ಟಿ.ಟಿ.ಎ. ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸುವರು’ ಎಂದು ವಿವರಿಸಿದರು.