ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2017 ಸಾಲಿನ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಿದ್ದು, ಬನ್ನಂಜೆ ಗೋವಿಂದಾಚಾರ್ಯ, ಪ್ರೊ.ಸೋಮಶೇಖರ ಇಮ್ರಾಪುರ, ಪ್ರೊ.ಎಚ್.ಜೆ.ಲಕ್ಕಪ್ಪಗೌಡ, ಪ್ರೊ.ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ, ಕಸ್ತೂರಿ ಬಾಯರಿ ಅವರಿಗೆ ಗೌರವ ಪ್ರಶಸ್ತಿ ನೀಡಲಾಗಿದೆ.
ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಐವರು ಸಾಹಿತಿಗಳಿಗೆ ನೀಡಲಾಗಿದೆ. ಪ್ರಶಸ್ತಿಯನ್ನು ₹50 ಸಾವಿರ ನಗದು ಹಾಗೂ ಪ್ರಮಾಣಪತ್ರಗಳೊಂದಿಗೆ ನೀಡಿ ಗೌರವಿಸಲು ಅಕಾಡೆಮಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅವರು ತಿಳಿಸಿದ್ದಾರೆ.
10 ಸಾಹಿತಿಗಳಿಗೆ ‘ಸಾಹಿತ್ಯಶ್ರೀ’ ಪ್ರಶಸ್ತಿ
* ಪ್ರೊ. ಧರಣೇಂದ್ರ ಕರಕುರಿ
* ಫಕೀರ್ ಮುಹಮ್ಮದ್ ಕಟ್ಪಾಡಿ
* ಡಾ. ವಿಜಯಶ್ರೀ ಸಬರದ
* ಡಾ. ವಿ. ಮುನಿವೆಂಕಟಪ್ಪ
* ಡಾ. ನಟರಾಜ ಹುಳಿಯಾರ್
* ಡಾ.ಕೆ. ಕೇಶವ ಶರ್ಮ
* ಡಾ. ಕರೀಗೌಡ ಬೀಚನಹಳ್ಳಿ
* ಪ್ರೊ. ತೇಜಸ್ವಿ ಕಟ್ಟೀಮನಿ
* ಡಾ. ಕಮಲಾ ಹೆಮ್ಮಿಗೆ
* ಶ್ರೀ ಕಂಚ್ಯಾಣಿ ಶರಣಪ್ಪ
(ಪ್ರಶಸ್ತಿ ₹25,000 ನಗದು, ಪ್ರಮಾಣಪತ್ರ, ಶಿಲಾಶಾಸನ ಬರೆಯುವ ಮಹಿಳೆಯ ಪುತ್ಥಳಿ ಜತೆಗೆ ಶಾಲು, ಹಾರದೊಂದಿಗೆ ಸನ್ಮಾನ ಒಳಗೊಂಡಿದೆ)
2016ರಲ್ಲಿ ಪ್ರಕಟವಾದ 18 ಪ್ರಕಾರದ ಅತ್ಯುತ್ತಮ ಕೃತಿಗಾಗಿ ಬಹುಮಾನಕ್ಕೆ ಆಯ್ಕೆಯಾದವರು
ಲೇಖಕರು | ಕೃತಿಯ ಹೆಸರು | ಪ್ರಕಾರ |
ಕೃಷ್ಣಮೂರ್ತಿ ಬಿಳಿಗೆರೆ | ಗಾಯಗೊಂಡಿದೆ ಗರಿಕೆಗಾನ | ಕಾವ್ಯ |
ಬಸವರಾಜ ಹೃತ್ಪಾಕ್ಷಿ | ಕಸಬಾರಿಗೆ ಪಾದ | ಯುವಕವಿಗಳ ಪ್ರಥಮ ಸಂಕಲನ |
ರೇಖಾ ಕಾಖಂಡಕಿ | ವೈವಸ್ವತ | ಕಾದಂಬರಿ |
ಜಯಪ್ರಕಾಶ ಮಾವಿನಕುಳಿ | ಬ್ರಹ್ಮರಾಕ್ಷಸ | ಸಣ್ಣಕತೆ |
ಸುಧೀರ್ ಅತ್ತಾವರ್ | ಬಕಾವಲಿಯ ಹೂ | ನಾಟಕ |
ಭಾರತಿ ಬಿ.ವಿ. | ಮಿಸಳ್ ಭಾಜಿ | ಲಲಿತ ಪ್ರಬಂಧ |
ಡಾ. ಬಿ.ಎಸ್. ತಲ್ವಾಡಿ | ಯುರೋಪ್ನ ಧಾರ್ಮಿಕ ನೆಲೆಗಳು | ಪ್ರವಾಸ ಸಾಹಿತ್ಯ |
ಪ್ರೀತಿ ನಾಗರಾಜ್ | ಕಣ್ಣಾಮುಚ್ಚೇ ಕಾಡೇಗೂಡೆ | ಜೀವನಚರಿತ್ರೆ |
ಡಾ. ಎಸ್. ನಟರಾಜ | ಕನ್ನಡ ಕಾವ್ಯ ಮೀಮಾಂಸೆ | ಸಾಹಿತ್ಯ ವಿಮರ್ಶೆ |
ಡಾ. ವೀರೇಶ ಬಡಿಗೇರ | ತಿಂತಿಣಿ ಮೌನೇಶ್ವರರ ವಚನಗಳು | ಗ್ರಂಥ ಸಂಪಾದನೆ |
ನಿರ್ಮಲಾ ಸುರತ್ಕಲ್ | ಶ್ರಮಯೇವ ಜಯತೆ | ಮಕ್ಕಳ ಸಾಹಿತ್ಯ |
ಡಾ. ಎ.ಎಸ್. ಕುಮಾರ ಸ್ವಾಮಿ | ಅಂತರ್ಜಲ ಬಳಕೆ | ವಿಜ್ಞಾನ ಸಾಹಿತ್ಯ |
ಡಾ. ಸಣ್ಣರಾಮ | ದಲಿತ ಚಳುವಳಿ ನಿನ್ನೆ, ಇಂದು, ನಾಳೆ | ಮಾನವಿಕ |
ಡಾ. ಶ್ರೀ ಶರತ್ಚಂದ್ರಸ್ವಾಮಿಗಳು | ಬೌದ್ಧ ಧರ್ಮ ದರ್ಶನ | ಸಂಶೋಧನೆ |
ಎ.ಆರ್. ಮಣಿಕಾಂತ್, ಹ.ಚ.ನಟೇಶಬಾಬು | ಗಿಫ್ಟೆಡ್ (ಕತೆಗಳು) | ಅನುವಾದ – 1(ಸೃಜನಶೀಲ) |
ಎಂ. ಅಬ್ದುಲ್ರೆಹಮಾನ್ ಪಾಷ | ಅಲ್ಲಾಹ್ನಿಂದ ನಿರಾಕೃತರು | ಅನುವಾದ –2(ಸೃಜನೇತರ) |
ರಾಜೇಶ್ವರಿ ತೇಜಸ್ವಿ | ನಮ್ಮ ಮನೆಗೂ ಬಂದರು ಗಾಂಧೀಜಿ! ಕೆಲವು ನೆನಪುಗಳು | ಸಂಕೀರ್ಣ |
ಶಾಂತಿ ಕೆ. ಅಪ್ಪಣ್ಣ | ಮನಸು ಅಭಿಸಾರಿಕೆ (ಕತೆಗಳು) | ಲೇಖಕರ ಮೊದಲ ಕೃತಿ |
(ಪ್ರಶಸ್ತಿ ₹ 25,000 ನಗದು ಮತ್ತು ಪ್ರಮಾಣಪತ್ರ ಒಳಗೊಂಡಿದೆ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.