ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಂಜೆ ಗೋವಿಂದಾಚಾರ್ಯ, ಸೋಮಶೇಖರ ಇಮ್ರಾಪುರ, ಲಕ್ಕಪ್ಪಗೌಡ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Last Updated 1 ಮಾರ್ಚ್ 2018, 12:47 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2017 ಸಾಲಿನ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಿದ್ದು, ಬನ್ನಂಜೆ ಗೋವಿಂದಾಚಾರ್ಯ, ಪ್ರೊ.ಸೋಮಶೇಖರ ಇಮ್ರಾಪುರ, ಪ್ರೊ.ಎಚ್.ಜೆ.ಲಕ್ಕಪ್ಪಗೌಡ, ಪ್ರೊ.ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ, ಕಸ್ತೂರಿ ಬಾಯರಿ ಅವರಿಗೆ ಗೌರವ ಪ್ರಶಸ್ತಿ ನೀಡಲಾಗಿದೆ.

ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಐವರು ಸಾಹಿತಿಗಳಿಗೆ ನೀಡಲಾಗಿದೆ. ಪ್ರಶಸ್ತಿಯನ್ನು ₹50 ಸಾವಿರ ನಗದು ಹಾಗೂ ಪ್ರಮಾಣಪತ್ರಗಳೊಂದಿಗೆ ನೀಡಿ ಗೌರವಿಸಲು ಅಕಾಡೆಮಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅವರು ತಿಳಿಸಿದ್ದಾರೆ.

10 ಸಾಹಿತಿಗಳಿಗೆ ‘ಸಾಹಿತ್ಯಶ್ರೀ’ ಪ್ರಶಸ್ತಿ
* ಪ್ರೊ. ಧರಣೇಂದ್ರ ಕರಕುರಿ
* ಫಕೀರ್ ಮುಹಮ್ಮದ್ ಕಟ್ಪಾಡಿ
* ಡಾ. ವಿಜಯಶ್ರೀ ಸಬರದ
* ಡಾ. ವಿ. ಮುನಿವೆಂಕಟಪ್ಪ
* ಡಾ. ನಟರಾಜ ಹುಳಿಯಾರ್
* ಡಾ.ಕೆ. ಕೇಶವ ಶರ್ಮ
* ಡಾ. ಕರೀಗೌಡ ಬೀಚನಹಳ್ಳಿ
* ಪ್ರೊ. ತೇಜಸ್ವಿ ಕಟ್ಟೀಮನಿ
* ಡಾ. ಕಮಲಾ ಹೆಮ್ಮಿಗೆ
* ಶ್ರೀ ಕಂಚ್ಯಾಣಿ ಶರಣಪ್ಪ
(ಪ್ರಶಸ್ತಿ ₹25,000 ನಗದು, ಪ್ರಮಾಣಪತ್ರ, ಶಿಲಾಶಾಸನ ಬರೆಯುವ ಮಹಿಳೆಯ ಪುತ್ಥಳಿ ಜತೆಗೆ ಶಾಲು, ಹಾರದೊಂದಿಗೆ ಸನ್ಮಾನ ಒಳಗೊಂಡಿದೆ)

2016ರಲ್ಲಿ ಪ್ರಕಟವಾದ 18 ಪ್ರಕಾರದ ಅತ್ಯುತ್ತಮ ಕೃತಿಗಾಗಿ ಬಹುಮಾನಕ್ಕೆ ಆಯ್ಕೆಯಾದವರು

ಲೇಖಕರು ಕೃತಿಯ ಹೆಸರು ಪ್ರಕಾರ
ಕೃಷ್ಣಮೂರ್ತಿ ಬಿಳಿಗೆರೆ ಗಾಯಗೊಂಡಿದೆ ಗರಿಕೆಗಾನ ಕಾವ್ಯ
ಬಸವರಾಜ ಹೃತ್ಪಾಕ್ಷಿ ಕಸಬಾರಿಗೆ ಪಾದ ಯುವಕವಿಗಳ ಪ್ರಥಮ ಸಂಕಲನ
ರೇಖಾ ಕಾಖಂಡಕಿ ವೈವಸ್ವತ ಕಾದಂಬರಿ
ಜಯಪ್ರಕಾಶ ಮಾವಿನಕುಳಿ  ಬ್ರಹ್ಮರಾಕ್ಷಸ ಸಣ್ಣಕತೆ
ಸುಧೀರ್ ಅತ್ತಾವರ್ ಬಕಾವಲಿಯ ಹೂ ನಾಟಕ
ಭಾರತಿ ಬಿ.ವಿ. ಮಿಸಳ್‌ ಭಾಜಿ ಲಲಿತ ಪ್ರಬಂಧ
ಡಾ. ಬಿ.ಎಸ್‌. ತಲ್ವಾಡಿ ಯುರೋಪ್‌ನ ಧಾರ್ಮಿಕ ನೆಲೆಗಳು ಪ್ರವಾಸ ಸಾಹಿತ್ಯ
ಪ್ರೀತಿ ನಾಗರಾಜ್ ಕಣ್ಣಾಮುಚ್ಚೇ ಕಾಡೇಗೂಡೆ ಜೀವನಚರಿತ್ರೆ
ಡಾ. ಎಸ್‌. ನಟರಾಜ  ಕನ್ನಡ ಕಾವ್ಯ ಮೀಮಾಂಸೆ ಸಾಹಿತ್ಯ ವಿಮರ್ಶೆ
ಡಾ. ವೀರೇಶ ಬಡಿಗೇರ ತಿಂತಿಣಿ ಮೌನೇಶ್ವರರ ವಚನಗಳು ಗ್ರಂಥ ಸಂಪಾದನೆ
ನಿರ್ಮಲಾ ಸುರತ್ಕಲ್ ಶ್ರಮಯೇವ ಜಯತೆ ಮಕ್ಕಳ ಸಾಹಿತ್ಯ
ಡಾ. ಎ.ಎಸ್‌. ಕುಮಾರ ಸ್ವಾಮಿ ಅಂತರ್ಜಲ ಬಳಕೆ ವಿಜ್ಞಾನ ಸಾಹಿತ್ಯ
ಡಾ. ಸಣ್ಣರಾಮ ದಲಿತ ಚಳುವಳಿ ನಿನ್ನೆ, ಇಂದು, ನಾಳೆ ಮಾನವಿಕ
ಡಾ. ಶ್ರೀ ಶರತ್‌ಚಂದ್ರಸ್ವಾಮಿಗಳು ಬೌದ್ಧ ಧರ್ಮ ದರ್ಶನ ಸಂಶೋಧನೆ
ಎ.ಆರ್‌. ಮಣಿಕಾಂತ್, ಹ.ಚ.ನಟೇಶಬಾಬು ಗಿಫ್ಟೆಡ್ (ಕತೆಗಳು) ಅನುವಾದ – 1(ಸೃಜನಶೀಲ)
ಎಂ. ಅಬ್ದುಲ್‌ರೆಹಮಾನ್ ಪಾಷ ಅಲ್ಲಾಹ್‌ನಿಂದ ನಿರಾಕೃತರು ಅನುವಾದ –2(ಸೃಜನೇತರ)
ರಾಜೇಶ್ವರಿ ತೇಜಸ್ವಿ ನಮ್ಮ ಮನೆಗೂ ಬಂದರು ಗಾಂಧೀಜಿ! ಕೆಲವು ನೆನಪುಗಳು ಸಂಕೀರ್ಣ
ಶಾಂತಿ ಕೆ. ಅಪ್ಪಣ್ಣ ಮನಸು ಅಭಿಸಾರಿಕೆ (ಕತೆಗಳು) ಲೇಖಕರ ಮೊದಲ ಕೃತಿ

(ಪ್ರಶಸ್ತಿ  ₹ 25,000 ನಗದು ಮತ್ತು ಪ್ರಮಾಣಪತ್ರ ಒಳಗೊಂಡಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT