ಸಂಜೆಯ ವೇಳೆಗೆ ಲೋಕೋಪಯೋಗಿ ಎಂಜಿನಿಯರ್ ಬಿ.ಆರ್.ದಯಾನಂದ ಮತ್ತು ಸಿಬ್ಬಂದಿ, ತಾತ್ಕಾಲಿಕ ರಸ್ತೆಯಲ್ಲಿ ಸಿಲುಕಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದರು. ನಂತರ ನೀರು ಪೈಪ್ಗಳಲ್ಲಿ ಹರಿಯುತ್ತಿದ್ದಂತೆ, ರಸ್ತೆ ಮೇಲಿನ ನೀರಿನ ಪ್ರಮಾಣ ಕಡಿಮೆಯಾಯಿತು.
'ಸೋಮವಾರ ಸಂಜೆಯೇ ರಸ್ತೆ ತೆರವುಗೊಳಿಸಲಾಗಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ' ಎಂದು ಎಂಜಿನಿಯರ್ ಸುಭಾಷ್ ವಡ್ಡಟ್ಟಿ ಹೇಳಿದರು.