ಜಿಲ್ಲೆಯ ಮೂರು ತಾಲ್ಲೂಕು ವ್ಯಾಪ್ತಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಡಿ.ಎಂ.ಪಿ ತೈಲ ವಿತರಿಸಲಾಗಿದೆ. 4 ಲಕ್ಷ ಡೋಸ್ ಲಸಿಕೆ ಹಾಕಲಾಗಿದೆ. ಡಿಸೆಂಬರ್ನಿಂದ ಆರೋಗ್ಯ ಕಾರ್ಯಕರ್ತರು, ವೈದ್ಯರು ಕಾಯಿಲೆ ಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಆದರೂ, ಕಾಯಿಲೆ ನಿರಂತರವಾಗಿ ಹಬ್ಬುತ್ತಿದೆ. ಮೂರು ಡೋಸ್ ಲಸಿಕೆ ತೆಗೆದುಕೊಂಡವರಲ್ಲೂ ವೈರಸ್ ತಗುಲಿರುವುದು ಮಲೆನಾಡಿನ ಜನರ ಆತಂಕವನ್ನು ಹೆಚ್ಚಿಸಿದೆ. ಕಾಯಿಲೆ ನಿವಾರಣೆಗೆ ನಿರ್ದಿಷ್ಟ ಲಸಿಕೆ ಸಂಶೋಧಿಸುವಂತೆ ಸರ್ಕಾರದ ಮೇಲೆ ಜನ ಒತ್ತಡ ಹಾಕುತ್ತಿದ್ದಾರೆ.