ಜೂನ್ 29ರಂದುವಾರ್ಡ್ನ ಬಾಗಿಲಿನ ಗಾಜನ್ನು ಸರಿಸಿ ತಪ್ಪಿಸಿಕೊಂಡಿದ್ದ 38 ವರ್ಷದ ಆತನನ್ನು ಪೊಲೀಸರು ಕದ್ರಾ ಬಳಿ ವಶಕ್ಕೆ ಪಡೆದಿದ್ದರು. ಬಳಿಕ ಪುನಃ ಚಿಕಿತ್ಸೆಗೆಂದು ‘ಕ್ರಿಮ್ಸ್’ಗೆ ದಾಖಲಿಸಿದ್ದರು. ಆದರೆ, ಮಂಗಳವಾರ ರಾತ್ರಿ 11.20ರ ಸುಮಾರಿಗೆ ವಾರ್ಡ್ನ ಹಿಂಬದಿಯ ಬಾಗಿಲಿನಿಂದ ತಪ್ಪಿಸಿಕೊಂಡ ಆತ, ಆಸ್ಪತ್ರೆಯ ಎದುರು ಅಳವಡಿಸಲಾಗಿರುವ ಬ್ಯಾರಿಕೇಡ್ಗಳ ನಡುವಿನ ಸಣ್ಣ ಜಾಗದಿಂದ ಹೊರಹೋಗಿದ್ದ.