ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಶ್ರೀಮಂತರು ನಡೆಸಿಕೊಡುವ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಬೇಡಿ. ಸರ್ಕಾರ ನಡೆಸುತ್ತಿರುವ ‘ಸಪ್ತಪದಿ’ಯಲ್ಲಿ ಪಾಲ್ಗೊಂಡರೆ ಜಾತಿ ತಾರತಮ್ಯ ಇರುವುದಿಲ್ಲ’ ಎಂದರು. ಆದರೆ, ಅಸ್ಪೃಶ್ಯತೆ ಆಚರಿಸುವವರ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಪ್ರಸ್ತಾಪವನ್ನೇ ಮಾಡಲಿಲ್ಲ.