ವಿಜಯಶಂಕರ್ ಮಾತನಾಡಿ, ಕಾರಣಾಂತರಗಳಿಂದ ಪಕ್ಷ ತೊರೆದಿದ್ದೆ. ಪಕ್ಷದಲ್ಲಿ ಸಂಸದ, ಶಾಸಕ ಮತ್ತು ಸಚಿವನಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದೆ. ಮುಂದೆಯೂ ಜವಾಬ್ದಾರಿಗಳನ್ನು ನಿಭಾಯಿಸುತ್ತೇನೆ. ಇನ್ನೆಂದಿಗೂ ಪಕ್ಷ ತೊರೆಯುವುದಿಲ್ಲ. ಕೊನೆಯವರೆಗೂ ಪಕ್ಷದಲ್ಲಿದ್ದು ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದರು.