ಈ ಮಾತು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಹುತೇಕರು ಮರಾಠಿ ಬಲ್ಲವರಿದ್ದರು. ಹೀಗಾಗಿ ಅವರ ಒತ್ತಾಯದ ಮೇರೆಗೆ ಮರಾಠಿಯಲ್ಲಿ ಮಾತನಾಡಿದೆ. ಕೊನೆಯಲ್ಲಿ ಜೈ ಮಹಾರಾಷ್ಟ್ರ ಎಂದು ಹೇಳಿದ್ದು ನಿಜ. ಆದರೆ, ನಾನು ಕರ್ನಾಟಕದಲ್ಲಿದ್ದೇನೆ. ನನ್ನ ಮಾತಿಗೆ ಕ್ಷಮೆ ಕೇಳುವೆ’ ಎಂದು ವಿವಾದ ತಿಳಿಯಾಗಿಸುವ ಪ್ರಯತ್ನ ಮಾಡಿದರು.