ಚಿಕ್ಕೋಡಿ ತಾಲ್ಲೂಕು ಮಲಿಕವಾಡದ ಸೈನಿಕ, ಏರ್ಮನ್ ರಾಜೇಂದ್ರ ಶ್ರೀಕಾಂತ ಸುತಾರ ಅವರ ತಾಯಿ ಸುನೀತಾ ಅವರ ಮನದಾಳದ ಮಾತುಗಳಿವು. ‘ನಮಗಿರುವುದು ಒಬ್ಬನೇ ಮಗ. ಮಗಳ ಮದುವೆಯಾಗಿದೆ. ತಂದೆಯಂತೆ ಮಗನಿಗೂ ದೇಶ ಸೇವೆಯ ಹಂಬಲ. ತಾನಾಗಿಯೇ ಸೈನ್ಯ ಸೇರಿದ್ದಾನೆ. ಪತಿ ಶ್ರೀಕಾಂತ ಸುತಾರ ನಿವೃತ್ತರಾದ ಮರುದಿನವೇ ಮಗನಿಗೆ ಏರ್ಫೋರ್ಸ್ನಲ್ಲಿ ಉದ್ಯೋಗದ ಆರ್ಡರ್ ಬಂತು. 2012ರಿಂದ ಲಕ್ನೋ, ಗೋರಖ್ಪುರ ಮೊದಲಾದ ಕಡೆ ಕೆಲಸ ಮಾಡಿ, ಈಗ ಜಮ್ಮುವಿನಲ್ಲಿದ್ದಾನೆ. ನನ್ನೊಂದಿಗೆ ಇಲ್ಲದಿದ್ದರೇನಂತೆ, ಭಾರತ ಮಾತೆ ರಕ್ಷಣೆಗಾಗಿ ಕಳುಹಿಸಿದ್ದೇವೆ’.