ಎಲ್ಲಾ ಯೋಜನೆಗಳ ಫಲ ಕಟ್ಟಕಡೆಯ ಪ್ರಜೆಗೆ ತಲುಪುವುದೇ ಅನುಮಾನ
ವಿಜ್ಞಾನಿಗಳೇನೊ ‘ಚಂದ್ರಯಾನ 2’ ಯೋಜನೆಯನ್ನು ಯಶಸ್ವಿಯಾಗಿ ಕೊನೆ ಮುಟ್ಟಿಸಿದರು ಅನ್ನಿ. ಆದರೆ, ಪ್ರಜೆಗಳಿಗೆ ತಲುಪಬೇಕಿದ್ದ ಸರ್ಕಾರಿ ಸತ್ಫಲಗಳೆಲ್ಲ ಕೊನೆ ಮುಟ್ಟುವಲ್ಲಿ ಯಾಕೆ ಸೋಲುತ್ತವೆ? ಸಾವಿರ ಕೋಟಿ ಸುರಿದ ನೀರಾವರಿ ಯೋಜನೆಯಲ್ಲಿ ಕಾಲುವೆಯ ತುದಿಯೆಲ್ಲ ಒಣ ಒಣ. ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಭಣಭಣ. ಹತ್ತಾರು ಸಾವಿರ ತಂತ್ರಜ್ಞರಿರುವ ಬಿಎಸ್ಎನ್ಎಲ್ ಟವರ್ ಕೆಳಗೇ ನೆಟ್ವರ್ಕ್ ನಾಸ್ತಿ. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧ ಇಲ್ಲ, ಅಥವಾ ಡಾಕ್ಟರ್ ಇಲ್ಲ. ಅಥವಾ ಎರಡೂ ಇಲ್ಲ. ಕೊನೆಗಾಣದ ಇಂಥ ತರಲೆಗಳು ‘ವಿಶ್ವಗುರು’ ಎನ್ನಿಸಿದ ಭಾರತದಲ್ಲೇ ಏಕಿಷ್ಟು ಜಾಸ್ತಿ? ನಮ್ಮ ‘ಗುರು’ತ್ವ ಏಕಿಷ್ಟು ಕಮ್ಮಿ?Last Updated 8 ಸೆಪ್ಟೆಂಬರ್ 2019, 7:22 IST