ಪಾಕಿಸ್ತಾನದವಾಣಿಜ್ಯ ನಗರಿ ಕರಾಚಿಯ ಜನರು ಮಂಗಳವಾರ ರಾತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ 'ಭಾರತದ ಯುದ್ಧ ವಿಮಾನಗಳು ಬರುತ್ತಿವೆ' ಎಂದು ಗಾಬರಿಯಿಂದ ಪೋಸ್ಟ್ಗಳನ್ನು ಹಂಚಿಕೊಂಡರು.
ಟ್ವಿಟರ್ನಲ್ಲಿ ಬುಧವಾರ ರಾತ್ರಿಯವರೆಗೂ #IndianAirForce #KarachiBlackOut #PakistanAirForce ಹ್ಯಾಷ್ಟ್ಯಾಗ್ಗಳು ಟಾಪ್ ಟ್ರೆಂಡಿಂಗ್ ಆಗಿದ್ದವು.
ಭಾರತದ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆ ದಾಟಿ ಬಂದು ಕರಾಚಿಯ ಮೇಲೆ ಹಾರಾಡುತ್ತಿವೆ. ಸಿಂಧ್ ಪ್ರಾಂತ್ಯದಲ್ಲಿ ಬಾಲಾಕೋಟ್ ಮಾದರಿಯ ಮತ್ತೊಂದು ವಾಯುದಾಳಿ ನಡೆಯಬಹುದು ಎಂಬ ಆತಂಕ ವ್ಯಾಪಕವಾಗಿ ವ್ಯಕ್ತವಾಯಿತು. ಅಲ್ಲಿನ ಅಧಿಕಾರಿಗಳು ಕರಾಚಿ ನಗರದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಬ್ಲಾಕ್ಔಟ್ ಮಾಡಿದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
'ಫೆಬ್ರುವರಿ 27, 2019ರ ನಂತರ ಆಗಸದಲ್ಲಿ ಪಾಕಿಸ್ತಾನ ವಾಯುಪಡೆಯ ವಿಮಾನಗಳು ಗಸ್ತು ತಿರುಗುತ್ತಿರುವುದು ಕೇಳಿಸಿತು. ಗಂಭೀರವಾದ್ದು ಏನು ಆಗುವುದಿಲ್ಲ ಎಂದುಕೊಂಡಿದ್ದೆ' ಎಂದು ಪರೋಕ್ಷವಾಗಿ ಬಾಲಾಕೋಟ್ ಪ್ರಕರಣವನ್ನು ಪಾಕಿಸ್ತಾನದ ಪತ್ರಕರ್ತ ವಾಜ್ಹಾತ್ ಕಝ್ಮಿ ನೆನಪಿಸಿಕೊಂಡಿದ್ದಾರೆ.
It's probably after 27th Feb 2019 that I have heard so many PAF jets patrolling the sky. I hope nothing serious is happening or expected to happen.
— Wajahat Kazmi (@KazmiWajahat) June 9, 2020
ಕರಾಚಿ ನಿವಾಸಿ ಸಲ್ಮಾನ್ ಮಂಝೂರ್ 'ಪಾಕಿಸ್ತಾನ ವಾಯುಪಡೆಯ ವಿಮಾನಗಳು ಗಸ್ತು ತಿರುಗುತ್ತಿರುವೆ' ಎಂದು ವಿಡಿಯೊ ತುಣುಕನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
#PAF Fighter jet "JF17 Thunder " & Mirage" patrolling over #Karachi and boarder areas of Sindh after formation of Cowards Indian jets was identified near LOC (#Sindh, #Pakistan)#Airstrike #India #IAF #SurgicalStrike #IndianArmy #PakistanAirForce pic.twitter.com/iO17VExvPK
— Salman Mansoor (@salmanzit) June 9, 2020
ಇದೇ ಮಾದರಿಯ ವಿಡಿಯೊ ತುಣುಕುಗಳನ್ನು ಟ್ವಿಟರ್ನಲ್ಲಿ ಕೆಲವೊಂದಿಷ್ಟು ಜನರು, 'ಪಾಕಿಸ್ತಾನದ ಕರಾಚಿ ನಗರದ ಮೇಲೆ ಭಾರತೀಯ ವಾಯುಪಡೆಯ ವಿಮಾನಗಳು ಹಾರಾಡುತ್ತಿವೆ' ಎಂದು ಹಂಚಿಕೊಂಡಿದ್ದಾರೆ.
Breaking News : This video is from Karachi posted by Karachi locals. they claimed it to be #IAF Jet came for Surgical strikes.... No confirmation from India. While localities blacked out. As PA lost 24 soldiers in #LAC in the past 3 days alone to Indian Army's response. pic.twitter.com/PybTfqdHmn
— News Line IFE 🌈Live📡 (@NewsLineIFE) June 10, 2020
ಪಾಕಿಸ್ತಾನದ ರಕ್ಷಣಾ ಇಲಾಖೆ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
'ನಮ್ಮ ವಿಮಾನಗಳು ಗಡಿ ನಿಯಂತ್ರಣ ರೇಖೆ ದಾಟಿಲ್ಲ' ಎಂಬ ಭಾರತೀಯ ವಾಯುಪಡೆಯ ಹೆಸರು ಹೇಳದ ಇಚ್ಛಿಸದ ಅಧಿಕಾರಿಗಳ ಹೇಳಿಕೆಯನ್ನು ಎಎನ್ಐ ಸುದ್ದಿಸಂಸ್ಥೆಯು ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.