<p><strong>ತಿಕೋಟಾ: </strong>ಪಟ್ಟಣದ ಅಥಣಿ ರಸ್ತೆಯಲ್ಲಿರುವ ಗುರು ಭವನದಲ್ಲಿ ಇದೇ 14ರ ಮಂಗಳವಾರ ಜಂಗಮ ವಟುಗಳ ಸಾಮೂಹಿಕ ಉಚಿತ ಅಯ್ಯಾಚಾರ ಹಾಗೂ ಧರ್ಮ ಸಭೆ ನಡೆಯಲಿದೆ.</p>.<p>ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು, ವಿರಕ್ತ ಮಠದ ಮಲ್ಲಿಕಾರ್ಜುನ ಸ್ವಾಮಿಗಳು, ನಾಗಠಾಣದ ಉದಯೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ದಾಶ್ಯಾಳ ಹಿರೇಮಠದ ಶಂಕ್ರಯ್ಯ ಶಾಸ್ತ್ರಿ, ಜ್ಯೋತಿಷಿ ಕಿರಣ ಜೋಷಿ ಅಯ್ಯಾಚಾರ ಹಾಗೂ ಧರ್ಮಸಭೆಯಲ್ಲಿ ಭಾಗಿಯಾಗಲಿದ್ದಾರೆ.</p>.<p>ಆಸಕ್ತ ಜಂಗಮ ವಟುಗಳ ಪಾಲಕರು, ತಮ್ಮ ಮಕ್ಕಳ ಹೆಸರನ್ನು ಇದೇ 12ರವರೆಗೆ ನೋಂದಾಯಿಸಲು ಕೋರಲಾಗಿದೆ. 9845519355, 9972505626 ಸಂಪರ್ಕಿಸಿರಿ.</p>.<p class="Briefhead"><strong>ಪರಿಹಾರ ವಿತರಣೆ</strong></p>.<p>ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಯಲ್ಲಪ್ಪ ಮಾಲಗಾರ ಈಚೆಗೆ ಸಿಡಿಲು ಬಡಿದು ಮೃತಪಟ್ಟಿದ್ದು, ಇವರ ಪತ್ನಿ ಬೌರವ್ವ ಮಾಲಗಾರ ಅವರಿಗೆ, ತಹಶೀಲ್ದಾರ್ ಎಸ್.ಎಸ್.ಸಂಪಗಾವಿ ₹ 5 ಲಕ್ಷ ಮೊತ್ತದ ಪರಿಹಾರ ಚೆಕ್ ವಿತರಿಸಿದರು.</p>.<p>ಕಂದಾಯ ನಿರೀಕ್ಷಕ ಎಸ್.ಎಸ್.ತಾವರಖೇಡ, ಹೊನವಾಡ ಗ್ರಾಮ ಲೆಕ್ಕಾಧಿಕಾರಿ ಎಂ.ಎ.ಅಕ್ಕಲಕೋಟ, ಗ್ರಾಮಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಕೋಟಾ: </strong>ಪಟ್ಟಣದ ಅಥಣಿ ರಸ್ತೆಯಲ್ಲಿರುವ ಗುರು ಭವನದಲ್ಲಿ ಇದೇ 14ರ ಮಂಗಳವಾರ ಜಂಗಮ ವಟುಗಳ ಸಾಮೂಹಿಕ ಉಚಿತ ಅಯ್ಯಾಚಾರ ಹಾಗೂ ಧರ್ಮ ಸಭೆ ನಡೆಯಲಿದೆ.</p>.<p>ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು, ವಿರಕ್ತ ಮಠದ ಮಲ್ಲಿಕಾರ್ಜುನ ಸ್ವಾಮಿಗಳು, ನಾಗಠಾಣದ ಉದಯೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ದಾಶ್ಯಾಳ ಹಿರೇಮಠದ ಶಂಕ್ರಯ್ಯ ಶಾಸ್ತ್ರಿ, ಜ್ಯೋತಿಷಿ ಕಿರಣ ಜೋಷಿ ಅಯ್ಯಾಚಾರ ಹಾಗೂ ಧರ್ಮಸಭೆಯಲ್ಲಿ ಭಾಗಿಯಾಗಲಿದ್ದಾರೆ.</p>.<p>ಆಸಕ್ತ ಜಂಗಮ ವಟುಗಳ ಪಾಲಕರು, ತಮ್ಮ ಮಕ್ಕಳ ಹೆಸರನ್ನು ಇದೇ 12ರವರೆಗೆ ನೋಂದಾಯಿಸಲು ಕೋರಲಾಗಿದೆ. 9845519355, 9972505626 ಸಂಪರ್ಕಿಸಿರಿ.</p>.<p class="Briefhead"><strong>ಪರಿಹಾರ ವಿತರಣೆ</strong></p>.<p>ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಯಲ್ಲಪ್ಪ ಮಾಲಗಾರ ಈಚೆಗೆ ಸಿಡಿಲು ಬಡಿದು ಮೃತಪಟ್ಟಿದ್ದು, ಇವರ ಪತ್ನಿ ಬೌರವ್ವ ಮಾಲಗಾರ ಅವರಿಗೆ, ತಹಶೀಲ್ದಾರ್ ಎಸ್.ಎಸ್.ಸಂಪಗಾವಿ ₹ 5 ಲಕ್ಷ ಮೊತ್ತದ ಪರಿಹಾರ ಚೆಕ್ ವಿತರಿಸಿದರು.</p>.<p>ಕಂದಾಯ ನಿರೀಕ್ಷಕ ಎಸ್.ಎಸ್.ತಾವರಖೇಡ, ಹೊನವಾಡ ಗ್ರಾಮ ಲೆಕ್ಕಾಧಿಕಾರಿ ಎಂ.ಎ.ಅಕ್ಕಲಕೋಟ, ಗ್ರಾಮಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>