ಆರೇಳು ವರ್ಷಗಳ ಹಿಂದೆಯೇ, ಎಸ್.ಎಲ್. ಭೈರಪ್ಪ ಅವರ 'ಪರ್ವ' ಕಾದಂಬರಿಯನ್ನು ನಾಟಕ ರೂಪಕ್ಕೆ ತರಲು ಮುಂದಾಗಿದ್ದವರು ನಿರ್ದೇಶಕ ಪ್ರಕಾಶ್ ಬೆಳವಾಡಿ. ಅದಕ್ಕಾಗಿ ಭೈರಪ್ಪ ಅವರನ್ನು ಭೇಟಿ ಕೂಡ ಮಾಡಿದ್ದರು. ಹೇಗೆ ಮಾಡುವುದು ಎಂಬ ಪ್ರಶ್ನೆ ಬಂದಾಗ, ಆ ವಿಚಾರವನ್ನು ಅಲ್ಲಿಗೇ ನಿಲ್ಲಿಸಿದ್ದರು. ಇದೀಗ ಮತ್ತೆ 'ಪರ್ವ'ವನ್ನು ಕೈಗೆತ್ತಿಕೊಂಡು, ರಂಗರೂಪಕ್ಕೆ ತರುವುದರ ಜೊತೆಗೆ ಮೈಸೂರಿನ ರಂಗಾಯಣಕ್ಕಾಗಿ ನಿರ್ದೇಶಿಸಿದ್ದಾರೆ. ಏಳೂವರೆ ಗಂಟೆಗಳ ಈ ನಾಟಕದ ವಿಶೇಷ ಪ್ರದರ್ಶನ ಮಾರ್ಚ್ 12ರಿಂದ 14ರವರೆಗೆ ಮೈಸೂರಿನಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ, ನಿರ್ದೇಶಕ ಪ್ರಕಾಶ್ ಬೆಳವಾಡಿ, 'ಪ್ರಜಾವಾಣಿ' ಯೊಂದಿಗೆ ಮಾತನಾಡಿದ್ದಾರೆ.