ಢಾಕಾ: ಬಾಂಗ್ಲಾದೇಶದ ಈಶ್ವರಿಪುರದ ಕಾಳಿ ದೇವಿ ಮಂದಿರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕೊರೊನಾದಿಂದ ಇಡೀ ಮಾನವ ಕುಲಕ್ಕೆ ಮುಕ್ತಿ ನೀಡುವಂತೆ ಮಾತೆ ಬಳಿ ಬೇಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಚೈತ್ರ ನವರಾತ್ರಿಗೂ ಮುನ್ನ 51 ಶಕ್ತಪೀಠಗಳಲ್ಲಿ ಒಂದಾದ ಈ ಕಾಳಿಮಾತೆಯ ದರ್ಶನದ ಭಾಗ್ಯ ಸಿಕ್ಕಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿರುವ ವಿಡಿಯೊ ಇಲ್ಲಿದೆ.