ಬೀಜಿಂಗ್: ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಶಾಂತಿ ಮತ್ತು ನೆಮ್ಮದಿ ನೆಲೆಸಲು ಚೀನಾ ಮತ್ತು ಭಾರತ ಗಡಿ ಒಪ್ಪಂದ ಅನುಸರಣೆಗೆ ಬದ್ಧರಾಗಿರಬೇಕು ಎಂದು ಚೀನಾದ ವಿದೇಶಾಂಗ ಸಚಿವರು ಸೋಮವಾರ ಹೇಳಿದ್ದಾರೆ.
ಎಲ್ಎಸಿ ಗಡಿಯಲ್ಲಿ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿ ಉಂಟಾಗಲು ಉಭಯ ದೇಶಗಳ ಲಿಖಿತ ಗಡಿ ಒಪ್ಪಂದಗಳಿಗೆ ಚೀನಾ ಅಗೌರವ ತೋರುತ್ತಿರುವುದು ಕಾರಣ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಆರೋಪ ಮಾಡಿದ ನಂತರ ಚೀನಾ ಈ ಪ್ರತಿಕ್ರಿಯೆ ನೀಡಿದೆ.
‘ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ಉಂಟಾಗುವಂತೆ ಮಾಡಲು ಎರಡೂ ದೇಶಗಳು ತಾವು ಸಹಿ ಮಾಡಿರುವ ಗಡಿ ಒಪ್ಪಂದದ ಅನುಸರಣೆಗೆ ಬದ್ಧರಾಗಿರಬೇಕು ಎಂದು ಚೀನಾ ಬಯಸುತ್ತದೆ’ ಎಂದು ವಿದೇಶಾಂಗ ಸಚಿವ ವಾಂಗ್ ವೆನ್ಬಿನ್ ಜೈಶಂಕರ್ ಹೇಳಿಕೆಗೆ ಪ್ರತಿಕ್ರಿಯಿಸಿದರು.