ಫಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ, ಈ ಬಗ್ಗೆ ಪ್ರತಿಕ್ರಿಯಿಸಿರುವ, ರಿಪಬ್ಲಿಕನ್ ಪಕ್ಷದ ಕಾಂಗ್ರೆಸ್ ಸದಸ್ಯ ಡೆವಿನ್ ನುನೆಸ್, ‘ಕಳೆದ ವಾರವಷ್ಟೇ, ಭಾರತದ ಗಡಿಯ ಟಿಬೆಟ್ನಲ್ಲಿ ಚೀನಾದ ಸರ್ವಾಧಿಕಾರಿ ಕ್ಸಿ ಜಿನ್ಪಿಂಗ್ ಅವರು ವಿಜಯ ಸಾಧಿಸಿದ್ದಾರೆ. 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಚೀನಾದ ಸರ್ವಾಧಿಕಾರಿಯೊಬ್ಬರು ಟಿಬೆಟ್ಗೆ ಭೇಟಿ ನೀಡಿದ್ದಾರೆ. ಈ ಮೂಲಕ ಭಾರತಕ್ಕೆ ಬೆದರಿಕೆ ಒಡ್ಡಿದ್ದಾರೆ, ಬೃಹತ್ ನೀರಿನ ಯೋಜನೆಯನ್ನು ನಿರ್ಮಿಸಲು ಹೊರಟಿರುವ ಚೀನಾದ ಅಧ್ಯಕ್ಷರು ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಬಹುಶಃ ಭಾರತದ ನೀರನ್ನು ಸಂಪರ್ಕವನ್ನು ಕತ್ತರಿಸಬಹುದು.’ ಎಂದು ಅವರು ಹೇಳಿದ್ದಾರೆ.