‘ಭಾರತದಿಂದ ನಾವು ಸಾಲದ ರೂಪದಲ್ಲಿ ₹31 ಸಾವಿರ ಕೋಟಿ ನೆರವು ಪಡೆದಿದ್ದೇವೆ. ಅಲ್ಲದೆ, ಇನ್ನೂ ಹೆಚ್ಚಿನ ಹಣಕಾಸಿನ ನೆರವು ನೀಡುವಂತೆ ಭಾರತಕ್ಕೆ ಕೋರಿದ್ದೆವು. ಆದರೆ, ಇಂಥ ಸಂದರ್ಭದಲ್ಲಿ ಭಾರತವೊಂದೇ ನಿರಂತರವಾಗಿ ನಮ್ಮ ನೆರವಿಗೆ ನಿಲ್ಲಲು ಸಾಧ್ಯವಿಲ್ಲ. ನಮಗೆ ಹಣಕಾಸಿನ ನೆರವು ನೀಡಲು ಭಾರತಕ್ಕೂ ಒಂದು ಮಿತಿ ಇದೆ. ಜೊತೆಗೆ ಈ ಸಾಲಗಳನ್ನು ತೀರಿಸಲು ನಾವು ಸಹ ಯೋಜನೆ ಹಾಕಿಕೊಳ್ಳಲೇಬೇಕಿದೆ. ಯಾಕೆಂದರೆ, ಇದು ದತ್ತಿ ದೇಣಿಗೆಯ ನೆರವು ಅಲ್ಲ’ ಎಂದು ತಿಳಿಸಿದರು.