21 ವರ್ಷಗಳ ಕಾಲ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿದ್ದರು. ಅಹಿಂಸೆ, ಶಾಂತಿಗೆ ಸಂಬಂಧಿಸಿದ ಅವರ ಸಿದ್ಧಾಂತ ಇಲ್ಲಿಯೇ ರೂಪುಗೊಂಡಿತ್ತು ಎಂದು ಗೆಂಗನ್ ವಿವರಿಸಿದರು. ಗಾಂಧೀಜಿ ಅವರನ್ನು ಹೊರದಬ್ಬಿದ್ದ ರೈಲು ನಿಲ್ದಾಣದಲ್ಲಿ ಪ್ರತಿವರ್ಷ ಅವರನ್ನು ಸ್ಮರಿಸಲಾಗುತ್ತಿದೆ. ಆದರೆ, ಕಳೆದ ವರ್ಷ ಕೋವಿಡ್ನಿಂದಾಗಿ ಸ್ಮರಣೆ ಕಾರ್ಯಕ್ರಮ ನಡೆಯಲಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.