ಸಿಂಗಪುರ: ಸಿಂಗಪುರ ಮೂಲದ ಗ್ಲೋಬಲ್ ಸ್ಕೂಲ್ಸ್ ಫೌಂಡೇಷನ್ (ಜಿಎಸ್ಎಫ್) ಭಾರತಕ್ಕೆ 500 ಆಮ್ಲಜನಕ ಕಾನ್ಸಂಟ್ರೇಟರ್ಗಳನ್ನು ಕಳುಹಿಸಿಕೊಟ್ಟಿದ್ದು, ಇವುಗಳನ್ನು ಸಣ್ಣ ಪಟ್ಟಣಗಳು, ದೂರ ಪ್ರದೇಶದ ಹಳ್ಳಿಗಳಿಗೆ ಕಳುಹಿಸಿಕೊಡಲು ಸೇವಾ ಇಂಟರ್ನ್ಯಾಷನಲ್ ವ್ಯವಸ್ಥೆ ಮಾಡಿದೆ.
‘ಭಾರತೀಯ ನೌಕಾಪಡೆಯ ಐಎನ್ಎಸ್ ಐರಾವತ ನೌಕೆಯಲ್ಲಿ ಈ ಸಲಕರಣೆಗಳ ಜತೆಗೆ 200 ಆಮ್ಲಜನಕ ಸಿಲಿಂಡರ್ಗಳನ್ನೂ ಕಳುಹಿಸಲಾಗಿದೆ. ಭಾರತದ ಅತ್ಯಂತ ಹಿಂದುಳಿದ ಪ್ರದೇಶಗಳಿಗೆ ಈ ಸಲಕರಣೆಗಳು ದೊರಕಬೇಕು ಎಂಬ ಗುರಿ ನಮ್ಮದು’ ಎಂಧು ಜಿಎಸ್ಎಫ್ನ ಅಧ್ಯಕ್ಷ ಅತುಲ್ ತೆಮುರ್ನಿಕರ್ ತಿಳಿಸಿದ್ದಾರೆ.