<p class="title"><span style="font-size:large;"><strong>ಅಹಮದಾಬಾದ್:</strong> ಆರ್ಟಿಐ ಕಾರ್ಯಕರ್ತ ಅಮಿತ್ ಜೇತ್ವಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿಬಿಜೆಪಿಯ ಮಾಜಿ ಸಂಸದ ದಿನು ಬೋಘಾ ಸೋಳಂಕಿ ಸೇರಿದಂತೆ ಎಲ್ಲ ಏಳು ಮಂದಿ ದೋಷಿಗಳು ಎಂಬುದಾಗಿ ಸಿಬಿಐ ವಿಶೇಷ ನ್ಯಾಯಾಲಯ ಹೇಳಿದೆ. ಶಿಕ್ಷೆ ಪ್ರಮಾಣವನ್ನು ಇದೇ 11 ರಂದು ಪ್ರಕಟಿಸಲಿದೆ.</span></p>.<p class="title"><span style="font-size:large;">ಸೋಳಂಕಿ ಮತ್ತು ಆತನ ಸಂಬಂಧಿ ಶಿವ ಸೋಳಂಕಿಯು ಈ ಕೊಲೆಯ ಪಿತೂರಿ ನಡೆಸಿದ್ದಾಗಿವಿಶೇಷ ನ್ಯಾಯಾಧೀಶ ಕೆ.ಎಂ.ದವೆ ಹೇಳಿದ್ದಾರೆ.ಗುಜರಾತ್ ಹೈಕೋರ್ಟ್ನ ಹೊರಭಾಗದಲ್ಲಿ 2010ರ ಜುಲೈ 10ರಂದು ಜೇತ್ವಾ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. </span></p>.<p class="title"><span style="font-size:large;">ಜುನಾಗಢದ ಸಂಸದ ಸೋಳಂಕಿ, ಗಿರ್ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಬಗ್ಗೆಆರ್ಟಿಐ ದಾಖಲೆಗಳ ಮೂಲಕ ಜೇತ್ವಾ ಮಾಹಿತಿ ಬಹಿರಂಗಪಡಿಸಿದ್ದರು. ಅಹಮದಾಬಾದ್ ಅಪರಾಧ ಪತ್ತೆ ದಳ(ಡಿಸಿಬಿ) ತನಿಖೆ ನಡೆಸಿ ಆರು ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><span style="font-size:large;"><strong>ಅಹಮದಾಬಾದ್:</strong> ಆರ್ಟಿಐ ಕಾರ್ಯಕರ್ತ ಅಮಿತ್ ಜೇತ್ವಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿಬಿಜೆಪಿಯ ಮಾಜಿ ಸಂಸದ ದಿನು ಬೋಘಾ ಸೋಳಂಕಿ ಸೇರಿದಂತೆ ಎಲ್ಲ ಏಳು ಮಂದಿ ದೋಷಿಗಳು ಎಂಬುದಾಗಿ ಸಿಬಿಐ ವಿಶೇಷ ನ್ಯಾಯಾಲಯ ಹೇಳಿದೆ. ಶಿಕ್ಷೆ ಪ್ರಮಾಣವನ್ನು ಇದೇ 11 ರಂದು ಪ್ರಕಟಿಸಲಿದೆ.</span></p>.<p class="title"><span style="font-size:large;">ಸೋಳಂಕಿ ಮತ್ತು ಆತನ ಸಂಬಂಧಿ ಶಿವ ಸೋಳಂಕಿಯು ಈ ಕೊಲೆಯ ಪಿತೂರಿ ನಡೆಸಿದ್ದಾಗಿವಿಶೇಷ ನ್ಯಾಯಾಧೀಶ ಕೆ.ಎಂ.ದವೆ ಹೇಳಿದ್ದಾರೆ.ಗುಜರಾತ್ ಹೈಕೋರ್ಟ್ನ ಹೊರಭಾಗದಲ್ಲಿ 2010ರ ಜುಲೈ 10ರಂದು ಜೇತ್ವಾ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. </span></p>.<p class="title"><span style="font-size:large;">ಜುನಾಗಢದ ಸಂಸದ ಸೋಳಂಕಿ, ಗಿರ್ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಬಗ್ಗೆಆರ್ಟಿಐ ದಾಖಲೆಗಳ ಮೂಲಕ ಜೇತ್ವಾ ಮಾಹಿತಿ ಬಹಿರಂಗಪಡಿಸಿದ್ದರು. ಅಹಮದಾಬಾದ್ ಅಪರಾಧ ಪತ್ತೆ ದಳ(ಡಿಸಿಬಿ) ತನಿಖೆ ನಡೆಸಿ ಆರು ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>