‘ಒಟ್ಟು ಎಂಟು ಎಕರೆಯಲ್ಲಿ ಅಡಿಕೆ, ತೆಂಗು, ಬಾಳೆ, ಕರಿಮೆಣಸು ಬೆಳೆದಿದ್ದೇನೆ. ಈಚೆಗೆ ಪಪ್ಪಾಯಿ ಸಹ ಬೆಳೆದಿದ್ದು, ಮೊದಲನೆ ಕಟಾವಿನಲ್ಲಿ ಲಾಭ ನೀಡಿದೆ. ಬೇಸಿಗೆಯಲ್ಲಿ ಉದ್ದು, ಅಲಸಂದಿಸಹ ಬೆಳೆಯಲಾಗುತ್ತದೆ. ಇದರ ಜೊತೆಗೆ ಮತ್ತೊಂದು ನಾಲ್ಕು ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ಕೇವಲ ಒಂದೇ ಬೆಳೆಯತ್ತ ಮುಖ ಮಾಡಿದರೆ, ರೈತರು ಆರ್ಥಿಕವಾಗಿ ಸುಧಾರಿಸುವುದಿಲ್ಲ. ಜಮೀನಿನ ದಡದಲ್ಲಿ ಸಾಗವಾನಿ, ಅಕೇಶಿಯಾ ಮರಗಳನ್ನು ಸಹ ಬೆಳೆಸಿ ಲಾಭ ಗಳಿಸಬಹುದು’ ಎನ್ನುತ್ತಾರೆ ರೈತ ಬಸವರಾಜ ಪಾಟೀಲ್.