‘ಈ ಬಾರಿ ಸುತ್ತಮುತ್ತಲಿನ ಗದ್ದೆ ಬಯಲುಗಳು ಒಂದೇ ಬಾರಿ ಕೊಯ್ಲು ಬಂದಿದ್ದವು. ಕಾಡಾನೆಗಳು ಮಳಲಿ, ಸತ್ತಿಗಾಲ್, ಇಬ್ಬಡಿ, ಕುದರಂಗಿ, ದೊಡ್ಡ ಸತ್ತಿಗಾಲ ಗ್ರಾಮದ ಸುತ್ತಮುತ್ತ ಸಂಚರಿಸುತ್ತಿವೆ. ಹಾಗಾಗಿ ಬೇಗ ಭತ್ತದ ಕೊಯ್ಲು ನಡೆಯುತ್ತಿದೆ. ಕಳೆದ ವರ್ಷದಂತೆಯೇ ಈ ಬಾರಿಯೂ ರೈತರು ಕಾಡಾನೆಗಳಿಂದ ಬೆಳೆ ಕಾಯುವ ಕೆಲಸ ಮಾಡುತ್ತಿದ್ದಾರೆ. ಭತ್ತವನ್ನು ಮನೆಗೆ ತರುವಷ್ಟರಲ್ಲಿ ಸಾಕಾಗಿ ಹೋಯಿತು’ ಎಂದು ಕೊಣ್ಣೂರು ಗ್ರಾಮದ ರೈತ ಕೃಷ್ಣಯ್ಯ ಹೇಳಿದರು.