<p><strong>ಹುಳು ಸುಡುವ ಮಣ್ಣು</strong><br /> ಸೊಪ್ಪು ತರಕಾರಿಗಳ ಗಿಡಗಳು ಚಿಗುರೊಡೆಯುತ್ತಿದ್ದಂತೇ ಕೀಟ, ಹುಳುಗಳ ಬಾಧೆ ಹೆಚ್ಚು. ಈ ಬಾಧೆಯಿಂದ ರಕ್ಷಣೆಗೆ ಬಹುತೇಕ ಮಂದಿ ರಾಸಾಯನಿಕ ಔಷಧಿಗಳ ಮೊರೆ ಹೋಗುತ್ತಾರೆ. ಅದರ ಬದಲು ಸೊಪ್ಪು ತರಕಾರಿ ಗಿಡಗಳಿಗೆ ಮಣ್ಣಿನ ಅಥವಾ ಸುಡುಮಣ್ಣಿನ ದೂಳನ್ನು ಸಂಜೆಯ ವೇಳೆ ಎರಚಬೇಕು.<br /> <br /> ಇದರಿಂದ ರಾತ್ರಿ ವೇಳೆ ಎಲೆಗಳ ಮೇಲೆ ಕುಳಿತು ಮೊಟ್ಟೆ ಇಡಲು ಬರುವ ಕೀಟಗಳು ಹತ್ತಿರ ಸುಳಿಯಲಾರದು. ಬೆಳಗಿನ ಜಾವ ಗಿಡಗಳಿಗೆ ನೀರು ಹಾಕುವುದರಿಂದ ಸೊಪ್ಪು ಸ್ವಚ್ಛವಾಗುತ್ತದೆ. ಇದರಿಂದ ರಾಸಾಯನಿಕ ಮುಕ್ತವಾದ ಶುಚಿಯಾದ ಸೊಪ್ಪು ಸಿಗುವುದು ಮಾತ್ರವಲ್ಲದೇ ಕ್ರಿಮಿಕೀಟಗಳ ಬಾಧೆಯಿಂದಯೂ ಸುಲಭದಲ್ಲಿ ಮುಕ್ತರಾಗಬಹುದು.<br /> <br /> <strong>ನೆಲಗುಂಡಿ ಬಲೆ</strong><br /> ಬೆಳೆಗಳಿಗೆ ಇಲಿ ಬಾಧೆ ಹೆಚ್ಚಿದ್ದರೆ ಹೀಗೆ ಮಾಡಿ: ಎರಡು ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಡಬ್ಬಿಯ ಮೇಲ್ಭಾಗವನ್ನು ಎರಡು ಇಂಚು ಕತ್ತರಿಸಿ. ಭೂಮಿಯ ಮೇಲಿನ ಭಾಗಕ್ಕೆ ಹೊಂದಿರುವಂತೆ ಡಬ್ಬಿಯನ್ನು ಆಳಕ್ಕೆ ಹುಗಿಯಿರಿ. (ನೆಲದ ಮಟ್ಟಕ್ಕೆ ಡಬ್ಬಿಯ ಮೇಲ್ಭಾಗ ಸರಿಯಾಗಿ ಇರಬೇಕು) ಇದರಲ್ಲಿ 3/4 ಭಾಗದಷ್ಟು ಸೋಪಿನ ಪುಡಿ ಮಿಶ್ರಿತ ನೀರು ತುಂಬಿ.<br /> <br /> ಹೀಗೆ ಇಲಿಗಳ ಬಿಲ ಹಾಗೂ ಓಡಾಡುವ ಮಾರ್ಗದಲ್ಲಿ 5 ರಿಂದ 6 ಡಬ್ಬಿಗಳನ್ನು ನೆಲದಲ್ಲಿ ಹುಗಿಯಿರಿ. ರಾತ್ರಿ ನೆಲವೆಂದು ತಿಳಿದು ಓಡುವಾಗ ಡಬ್ಬಿಯಲ್ಲಿ ಬಿದ್ದು ಮೇಲೆ ಬರಲಾರದೆ ಸಾವನ್ನಪ್ಪುತ್ತವೆ. ಬೆಳೆಯನ್ನು ಬಾಧಿಸುವ ಎಲ್ಲ ರೀತಿಯ ನಿಶಾಚರಿಗಳ ಉಪದ್ರವಕ್ಕೂ ಈ ಪ್ರಯೋಗ ಉತ್ತಮ ಮಾರ್ಗ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಳು ಸುಡುವ ಮಣ್ಣು</strong><br /> ಸೊಪ್ಪು ತರಕಾರಿಗಳ ಗಿಡಗಳು ಚಿಗುರೊಡೆಯುತ್ತಿದ್ದಂತೇ ಕೀಟ, ಹುಳುಗಳ ಬಾಧೆ ಹೆಚ್ಚು. ಈ ಬಾಧೆಯಿಂದ ರಕ್ಷಣೆಗೆ ಬಹುತೇಕ ಮಂದಿ ರಾಸಾಯನಿಕ ಔಷಧಿಗಳ ಮೊರೆ ಹೋಗುತ್ತಾರೆ. ಅದರ ಬದಲು ಸೊಪ್ಪು ತರಕಾರಿ ಗಿಡಗಳಿಗೆ ಮಣ್ಣಿನ ಅಥವಾ ಸುಡುಮಣ್ಣಿನ ದೂಳನ್ನು ಸಂಜೆಯ ವೇಳೆ ಎರಚಬೇಕು.<br /> <br /> ಇದರಿಂದ ರಾತ್ರಿ ವೇಳೆ ಎಲೆಗಳ ಮೇಲೆ ಕುಳಿತು ಮೊಟ್ಟೆ ಇಡಲು ಬರುವ ಕೀಟಗಳು ಹತ್ತಿರ ಸುಳಿಯಲಾರದು. ಬೆಳಗಿನ ಜಾವ ಗಿಡಗಳಿಗೆ ನೀರು ಹಾಕುವುದರಿಂದ ಸೊಪ್ಪು ಸ್ವಚ್ಛವಾಗುತ್ತದೆ. ಇದರಿಂದ ರಾಸಾಯನಿಕ ಮುಕ್ತವಾದ ಶುಚಿಯಾದ ಸೊಪ್ಪು ಸಿಗುವುದು ಮಾತ್ರವಲ್ಲದೇ ಕ್ರಿಮಿಕೀಟಗಳ ಬಾಧೆಯಿಂದಯೂ ಸುಲಭದಲ್ಲಿ ಮುಕ್ತರಾಗಬಹುದು.<br /> <br /> <strong>ನೆಲಗುಂಡಿ ಬಲೆ</strong><br /> ಬೆಳೆಗಳಿಗೆ ಇಲಿ ಬಾಧೆ ಹೆಚ್ಚಿದ್ದರೆ ಹೀಗೆ ಮಾಡಿ: ಎರಡು ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಡಬ್ಬಿಯ ಮೇಲ್ಭಾಗವನ್ನು ಎರಡು ಇಂಚು ಕತ್ತರಿಸಿ. ಭೂಮಿಯ ಮೇಲಿನ ಭಾಗಕ್ಕೆ ಹೊಂದಿರುವಂತೆ ಡಬ್ಬಿಯನ್ನು ಆಳಕ್ಕೆ ಹುಗಿಯಿರಿ. (ನೆಲದ ಮಟ್ಟಕ್ಕೆ ಡಬ್ಬಿಯ ಮೇಲ್ಭಾಗ ಸರಿಯಾಗಿ ಇರಬೇಕು) ಇದರಲ್ಲಿ 3/4 ಭಾಗದಷ್ಟು ಸೋಪಿನ ಪುಡಿ ಮಿಶ್ರಿತ ನೀರು ತುಂಬಿ.<br /> <br /> ಹೀಗೆ ಇಲಿಗಳ ಬಿಲ ಹಾಗೂ ಓಡಾಡುವ ಮಾರ್ಗದಲ್ಲಿ 5 ರಿಂದ 6 ಡಬ್ಬಿಗಳನ್ನು ನೆಲದಲ್ಲಿ ಹುಗಿಯಿರಿ. ರಾತ್ರಿ ನೆಲವೆಂದು ತಿಳಿದು ಓಡುವಾಗ ಡಬ್ಬಿಯಲ್ಲಿ ಬಿದ್ದು ಮೇಲೆ ಬರಲಾರದೆ ಸಾವನ್ನಪ್ಪುತ್ತವೆ. ಬೆಳೆಯನ್ನು ಬಾಧಿಸುವ ಎಲ್ಲ ರೀತಿಯ ನಿಶಾಚರಿಗಳ ಉಪದ್ರವಕ್ಕೂ ಈ ಪ್ರಯೋಗ ಉತ್ತಮ ಮಾರ್ಗ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>